ಕರ್ನಾಟಕ

‘ಕುಮಾರಸ್ವಾಮಿ ಭಾಷಣದ ವೇಳೆ ಕುಸುಮಾ ಶಿವಳ್ಳಿ ಕಣ್ಣೀರು’

Pinterest LinkedIn Tumblr


ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಭಾಷಣದ ವೇಳೆ ಬಹಿರಂಗ ಸಮಾವೇಶದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಕಣ್ಣೀರಿಟ್ಟ ಘಟನೆ ನಡೆದಿದೆ.

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದ ವೇಳೆ ಶಿವಳ್ಳಿ ಪತ್ನಿ ಕುಸುಮಾ ಅವರನ್ನು ಕೈ ಬಿಡಬೇಡಿ ಅವರನ್ನು ಗೆಲ್ಲಿಸಿ ಎಂದು ಕುಮಾರಸ್ವಾಮಿ ಶಿವಳ್ಳಿ ಹೆಸರು ಪ್ರಸ್ತಾಪ ಮಾಡುತ್ತಿದ್ದಂತೆ ಕುಸುಮಾ ಶಿವಳ್ಳಿ ಕಣ್ಣೀರಿಟ್ಟಿದ್ದಾರೆ. ಇನ್ನೂ ಇದೇ ಸಂದರ್ಭದಲ್ಲಿ ಪುತ್ರ ಅಮರ ಶಿವಳ್ಳಿ ಮತ್ತು ಕುಸುಮಾ ಶಿವಳ್ಳಿ ಅರ್ಧ ಗಂಟೆಗಳವರೆಗೆ ಕೈ ಜೋಡಿಸಿ ಸಿಎಂ ಭಾಷಣದ ವೇಳೆ ಪಕ್ಕಾದಲ್ಲಿ ನಿಂತಿದ್ದರು.

ನಂತರ ಮಾತನಾಡಿದ ಅವರು, ಶಿವಳ್ಳಿ ಅವರು ಸರಳ ಸಜ್ಜನ ರಾಜಕಾರಣಿ, ಅವರು ಹಣ ಆಸ್ತಿ ಮಾಡಿಲ್ಲ, ನಿಮ್ಮಂಥವರ ಪ್ರೀತಿಗಳಿಸಿದ್ದಾರೆ. ಜಾತಿ ಆಧಾರದ ಮೇಲೆ ಸಹೋದರಿಯನ್ನು ಆಯ್ಕೆ ಮಾಡಬೇಡಿ, ಅವರಿಗೆ ಮೂರು ಮಕ್ಕಳಿದ್ದಾರೆ. ಸಾವಿನ ನೋವಲ್ಲು ಶಿವಳ್ಳಿ ಮಗಳು ಎಸ್.ಎಸ್.ಎಲ್ ಸಿ ಎಕ್ಸಾಮ್ ಬರೆದಿದ್ದರು. ಕುಂದಗೋಳದ ಮಹಾಜನತೆಗೆ ಮನವಿ ಮಾಡುತ್ತೇನೆ ದಯಾವಿಟ್ಟು ಕುಸುಮಾ ಶಿವಳ್ಳಿಯವರನ್ನು ಗೆಲ್ಲಿಸಿ ಎಂದು ಕೇಳಿಕೊಂಡರು.

Comments are closed.