ಕರ್ನಾಟಕ

ಜ್ಯೋತಿಷಿಗಳಿಗೆ ಒಂದು ಕೋಟಿ ಗೆಲ್ಲುವ ಕೊಡುಗೆ!

Pinterest LinkedIn Tumblr


ಬೆಂಗಳೂರು: ಕರ್ನಾಟಕ ವಿಚಾರ ವೇದಿಕೆವತಿಯಿಂದ ಜ್ಯೋತಿಷಿಗಳಿಗೆ ಬಂಪರ್ ಆಫರ್ ಸಿಕ್ಕಿದ್ದು, ಬುದ್ಧಿಜೀವಿಗಳು ಕೇಳೋ ಪ್ರಶ್ನೆಗೆ ಉತ್ತರಿಸಿದರೆ, ಒಂದು ಕೋಟಿ ಗೆಲ್ಲುವ ಅವಕಾಶವಿದೆ.

ಚುನಾವಣೆ ಫಲಿತಾಂಶದ ಬಗ್ಗೆ ಬುದ್ದಿಜೀವಿಗಳು ಕೇಳುವ ಒಂದು ಸರಳ ಪ್ರಶ್ನೆಗೆ ಜ್ಯೋತಿಷಿಗಳು ಉತ್ತರಿಸಿದರೆ, ಅವರಿಗೆ ಒಂದು ಕೋಟಿ ರೂಪಾಯಿ ಗೆಲ್ಲೋ ಅವಕಾಶವಿದೆ.

ಇನ್ನು ಬುದ್ಧಿಜೀವಿಗಳು ಕೇಳುವ ಆ ಸರಳ ಪ್ರಶ್ನೆಯೆಂದರೆ, 543 ಲೋಕ್ಷಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ತಾರೆ? ಯಾರು ಸೋಲ್ತಾರೆ?. ಎಷ್ಟು ಮತಗಳ ಅಂತರದಿಂದ ಗೆಲ್ತಾರೆ ಹಾಗೂ ಸೋಲ್ತಾರೆ ಎಂಬುದರ ಬಗ್ಗೆ ನಿಖರ ಭವಿಷ್ಯ ಹೇಳಿದ್ರೆ ಸಾಕು. ಜ್ಯೋತಿಷಿಗಳು ಒಂದು ಕೋಟಿ ರೂ. ಬಹುಮಾನ ಗೆಲ್ಲಬಹುದು.

ಮೇ20ರ ತನಕ ಇದಕ್ಕೆ ಅವಕಾಶ ನೀಡಲಾಗಿದ್ದು, ಮೇ 24ರಂದು ನಿಜಭವಿಷ್ಯ ನುಡಿದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಲಾಗುತ್ತದೆ. ಆದ್ರೆ ಸೋತ ಜ್ಯೋತಿಷಿಗಳು ಮಾತ್ರ 1 ರೂ. ನೀಡಬೇಕು.

Comments are closed.