ಮಂಡ್ಯ: ಮಂಡ್ಯ ಕೆ.ಆರ್.ಪೇಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ನಾರಾಯಣಗೌಡ, ನಿಖಿಲ್ ಕುಮಾರ್ ಚುನಾವಣೆಯಲ್ಲಿ ಗೆದ್ದಾಗಿದೆ. ಈ ಬಗೆಗೆ ಯಾರು ಬೇಕಾದ್ರು ಬೆಟ್ಟಿಂಗ್ ಕಟ್ಟಬಹುದು. ಬೆಟ್ಟಿಂಗ್ ಅಂದ್ರೆ ಕೋಟ್ಯಂತರ ರೂ. ಲಕ್ಷಾಂತರ ರೂ. ಕಟ್ಟೋದಲ್ಲ. ಒಂದು ರೂ. ಕಟ್ಟಿದ್ರೂ ಆಯ್ತು. ನೂರಾ ಒಂದು ರೂ. ಕಟ್ಟಿದ್ರೂ ಆಯ್ತು. ಲೀಡ್ ಎಷ್ಟು ಎಂದು ಹೇಳಲ್ಲ. ಆದ್ರೆ ನಿಖಿಲ್ ಗೆಲ್ತಾರೆ ಎಂದು ಬೆಟ್ಟಿಂಗ್ ಕಟ್ತೀನಿ. ಕೆಲವು ಕಡೆ ಸುಮಲತಾಗೆ ಲೀಡ್ ಅನ್ನೋದು ಭ್ರಮೆ. ಯಾಕಂದ್ರೆ ಎಲ್ಲಾ ಕಡೆಯೂ ಜನ ಜೆಡಿಎಸ್ ಶಾಸಕರನ್ನ ಗೆಲ್ಲಿಸಿದ್ದಾರೆ. ಎಲ್ಲಾ ಶಾಸಕರೂ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದ್ರು.
ಅಲ್ಲದೇ, ಸುಮಲತಾ ಪರ ಪ್ರಚಾರಕ್ಕೆ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಬಗ್ಗೆನೂ ನಾರಾಯಣಗೌಡ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸಿನೆಮಾ ಸ್ಟಾರ್ಗಳು ಬಂದ್ರು ಗಾಳಿಪಟ ಹವಾ ಬಿಟ್ರು ಹೋದ್ರು ಎಂದೂ ನಟರಿಬ್ಬರ ವಿರುದ್ದ ಟೀಕೆ ಮಾಡಿದ್ರು.
ಈಗ ಎಲ್ಲಿ ಹೋಗಿದ್ದಾರೆ ಅವರು ರೈತರ ಕಷ್ಟಕ್ಕೆ ನಾವೇ ಆಗಬೇಕು. ಸಿನಿಮಾ ಇಂಡಸ್ಟ್ರೀಯವರು ಬಂದು ಭಾಷಣ ಹೊಡಿತಿದ್ರು ಈಗ ಎಲ್ಲಿ…? ನಾವಾಗೆ ಹೋಗಿ ಕರೆದುಕೊಂಡು ಬಂದ್ರಷ್ಟೇ ಬರೋದು ಅವರು. ಯಾರಿಗಾದ್ರು ಒನ್ ಬೋರ್ ವೆಲ್ ತೆಗೆಸಿಕೊಟ್ಟಿದ್ದಾರಾ..? ಒಬ್ಬ ರೈತನಿಗೆ ಉಳುಮೆಗೆ ದನಗಳನ್ನ ಏನಾದ್ರು ಕೊಡ್ಸಿದ್ದಾರಾ..? ಈಗ ಜನ ಅವರನ್ನ ಭೇಟಿ ಮಾಡಲೂ ಸಹ ಸಾಧ್ಯವಿಲ್ಲ ಎಂದೂ ಟೀಕಿಸಿದ್ದಾರೆ.
Comments are closed.