ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಪೊಲೀಸರ ಬಳಿ ವಿನಂತಿಸಿದ್ದು, ಪ್ರಧಾನಿ ಮೋದಿಯನ್ನು ನೋಡಬೇಕೆಂದು ಮನವಿ ಮಾಡಿದ್ದಾನೆ. ಪ್ರಧಾನಿ ಮೋದಿಯ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಾಥ್ ಕೊಡಲು ಈ ವ್ಯಕ್ತಿ ಮುಂದಾಗಿದ್ದು, ತನ್ನ ಕೆಲಸಕ್ಕೆ ಕೇಂದ್ರ ಸರ್ಕಾರ ಮತ್ತು ಪೊಲೀಸರ ಸಹಾಯ ಕೇಳಿದ್ದಾನೆ.
ಸುರೇಶ್ ಎಂಬಾತ ಶ್ರೀರಾಂಪುರ ಪೊಲೀಸರಲ್ಲಿ ಈ ವಿನಂತಿ ಮಾಡಿದ್ದು, ಮೂತ್ರ ವಿಸರ್ಜನೆ ಮಾಡೋರು , ರಸ್ತೆಯಲ್ಲಿಉಗುಳೋರೇ ಈತನ ಟಾರ್ಗೆಟ್ ಆಗಿದ್ದಾರೆ. ಇಂಥವರಿಗೆ ಪ್ರತಿದಿನ ₹.2000 ರೂ. ದಂಡ ವಿಧಿಸಿ, ಕೇಂದ್ರ ಸರ್ಕಾರಕ್ಕೆ ಪ್ರತಿದಿನ 8 ಲಕ್ಷ ರೂಪಾಯಿ ಲಾಭ ಮಾಡಿಕೊಡ್ತಾನೆಂದು ಹೇಳಿದ್ದಾನೆ. ಅಲ್ಲದೇ ನೂರಾರು ಜನರ ತಂಡ ಕಟ್ಟಿ ಕಾರ್ಯಾಚರಣೆ ನಡೆಸುತ್ತಾನೆಂದು ಹೇಳಿದ್ದಾನೆ.
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲು ಈತ ಶ್ರೀರಾಂಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ನೈತಿಕ ಪೊಲೀಸ್ಗಿರಿಗೆ ಅನುಮತಿ ಕೇಳಿದ್ದಾನೆ.
Comments are closed.