ಕರ್ನಾಟಕ

ಧರ್ಮಸ್ಥಳಕ್ಕೆಹೆಂಡತಿಯ ಕರೆದೊಯ್ದು ಮರಳಿ ಬರುವಾಗ ಮಾಡಿದ ನೀಚಕೃತ್ಯ

Pinterest LinkedIn Tumblr


ಬೆಂಗಳೂರು: ಧರ್ಮಸ್ಥಳ ದೇವರ ದರ್ಶನಕ್ಕೆಂದು ಪತ್ನಿಯನ್ನು ಕರೆದುಕೊಂಡು ಹೋದ ಪತಿ ನೀಚಕೃತ್ಯ ಎಸಗಿದ್ದಾನೆ.

ಸದಾ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಪತಿ, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈಯ್ಯಲು ಯತ್ನಿಸಿದ್ದಾನೆ. ಬೆಂಗಳೂರು ರಾಜಾಜಿನಗರ ನಿವಾಸಿ ನವೀನ್​ ಆರೋಪಿಯಾಗಿದ್ದು ಈಗ ಆತನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ಟೆಕ್ಕಿ ನವೀನ್​ ಹಾಗೂ ಆತನ ಪತ್ನಿ ರಾಜಾಜಿನಗರದಲ್ಲಿ ವಾಸವಾಗಿದ್ದರು. ವರದಕ್ಷಿಣೆಗಾಗಿ ಸದಾ ಪೀಡಿಸುತ್ತಿದ್ದ. ಇತ್ತೀಚೆಗೆ ಅವರಿಬ್ಬರ ನಡುವೆ ಕಲಹವೂ ಆಗಿತ್ತು. ಆದರೆ ನವೀನ್​ ಧರ್ಮಸ್ಥಳಕ್ಕೆ ಪತ್ನಿಯನ್ನು ಕರೆದೊಯ್ದಿದ್ದ. ಅಲ್ಲಿಂದ ಬರುವಾಗ ಕುಣಿಗಲ್​ ಬಳಿ ಬರುತ್ತಿದ್ದಂತೆ ಕಬ್ಬಿಣದ ರಾಡ್​ನಿಂದ ಪತ್ನಿ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಆದರೆ ಅದೃಷ್ಟವಶಾತ್​ ಆಕೆ ತಪ್ಪಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮಹಿಳೆಯ ಪಾಲಕರು ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.