ಕರ್ನಾಟಕ

ಸುಮಲತಾ ಅಂಬರೀಶ್ ಗೆ ಜೆಡಿಎಸ್ ಕಾರ್ಯಕರ್ತರಿಂದ ಪಂಚ ಪ್ರಶ್ನೆಗಳು

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ಮೈತ್ರಿಯಲ್ಲಿ ಸೀಟುಗಳ ಹಂಚಿಕೆಯಲ್ಲಿ ಒಮ್ಮತವೇ ಬರುತ್ತಿಲ್ಲ. ಈ ಎಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿಗೆ ಕಬ್ಬಿಣದ ಕಡಲೆಯಾದಂತೆ ಆಗಿದೆ. ಚುನಾವಣೆಗೆ ಸ್ಪರ್ಧಿಸಲು ನಟಿ ಸುಮಲತಾ ಅಂಬರೀಶ್ ಮುಂದಾಗಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೈತ್ರಿಯ ಜೆಡಿಎಸ್ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಅಖಾಡಕ್ಕಿಳಿಸಲು ಸಿದ್ಧಗೊಂಡಿದೆ. ಅಂಬರೀಶ್ ಅಭಿಮಾನಿಗಳಾಗಿರುವ ಜೆಡಿಎಸ್ ಕಾರ್ಯಕರ್ತರು ಸುಮಲತಾರ ಮುಂದೆ ಪಂಚ ಪ್ರಶ್ನೆಗಳನ್ನು ಇಟ್ಟಿದ್ದಾರೆ.

ಪಂಚ ಪ್ರಶ್ನೆಗಳು:
ಪ್ರಶ್ನೆ 1: ಅಂಬರೀಶಣ್ಣ ಬದುಕಿದ್ದಾಗ ನನ್ನ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತರಲ್ಲ ಅಂದಿದ್ರು. ಅವರ ಮಾತಿಗೆ ಕಿಂಚಿತ್ತೂ ಬೆಲೆ ಕೊಡಲ್ವಾ..?
ಪ್ರಶ್ನೆ 2: ಕಳೆದ ಬಾರಿ ಮನೆ ಬಾಗಿಲಿಗೆ ಬಿ-ಫಾರಂ ಕೊಟ್ಟಿದ್ರೂ ಎಲೆಕ್ಷನ್‍ನಿಂದ ದೂರ ಉಳಿದಿದ್ದು ನಿಮಗೆ ಮರೆತು ಹೋಯ್ತಾ..?
ಪ್ರಶ್ನೆ 3: ಮಂಡ್ಯ ಜನರ ಋಣ ತೀರಿಸಲು ರಾಜಕೀಯನೇ ಬೇಕಾ…? ಎನ್‍ಜಿಓ ತೆರೆದು ಸಹಾಯ ಮಾಡೋಕೆ ಆಗಲ್ವಾ..?
ಪ್ರಶ್ನೆ 4: ಅಂಬರೀಶ್ ನಿಧನರಾದಾಗ ಕುಮಾರಣ್ಣ ಸಾಮಾನ್ಯ ಅಭಿಮಾನಿಯಂತೆ ಮಂಡ್ಯದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಮರೆತು ಹೋಯ್ತಾ..?
ಪ್ರಶ್ನೆ 5: ಅಂಬಿ ಅಣ್ಣನ ಅಗಲಿಕೆಯನ್ನೇ ಬಂಡವಾಳ ಮಾಡಿಕೊಂಡ ನಿಮ್ಮನ್ನ ಗೆಲ್ಲಿಸಬೇಕಾ..? ನೇರವಾಗಿ ಹೇಳಿಬಿಡಿ.. (ಅಂಬರೀಶ್ ಅಣ್ಣನ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಕಟ್ಟಬೇಕು ಎಂದ ಕುಮಾರಣ್ಣನ ಗೆಲ್ಲಿಸಬೇಕೋ..? ಅಥವಾ ನಿಮ್ಮನ್ನ ಗೆಲ್ಲಿಸಬೇಕಾ..?)

ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಜೆಡಿಎಸ್ ಕಾರ್ಯಕರ್ತರು ಸುಮಲತಾರಿಗೆ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಕೇಳಿಕೊಂಡಿದ್ದಾರೆ. ಇತ್ತ ಸುಮಲತಾ ಅಂಬರೀಶ್ ಮಂಡ್ಯದಲ್ಲಿರುವ ಶಿಫ್ಟ್ ಆಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸೋದು ಖಂಡಿತ ಎಂದು ಹೇಳಿದ್ದಾರೆ.

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಂಡ್ಯದಿಂದ ಮೊಮ್ಮಗ ನಿಖಿಲ್ ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇತ್ತ ನಿಖಿಲ್ ಕುಮಾರ್ ಸಹ ಮಂಡ್ಯದಲ್ಲಿ ಮಿಂಚಿನಂತೆ ಸಂಚಾರ ನಡೆಸುತ್ತಿದ್ದಾರೆ.

Comments are closed.