ಕರ್ನಾಟಕ

ದೇವಸ್ಥಾನದ ವಿಷ ಪ್ರಸಾದ ಸೇವನೆಯಿಂದ ಮಹಿಳೆ ಸಾವು, 9 ಜನ ಅಸ್ವಸ್ಥ.

Pinterest LinkedIn Tumblr

ಚಿಕ್ಕಬಳ್ಳಾಪುರ : ಚಿಂತಾಮಣಿ ನಗರದ ನಾರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ಶುಕ್ರವಾರ ಪ್ರಸಾದ ಸೇವಿಸಿ ಒಬ್ಬರು ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕವಿತಾ(28) ಎಂಬಾಕೆ ಮೃತಪಟ್ಟ ಮಹಿಳೆಯಾಗಿದ್ದು. ಗಂಗಾಧರ, ಗಾನವಿ, ಚರಣ್, ನಾರಾಯಣಮ್ಮ ಮತ್ತು ವೆಂಕಟರಮಣಪ್ಪ ಸೇರಿ ಇತರೆ 9 ಜನರ ಸ್ಥಿತಿ ಗಂಭೀರವಾಗಿದೆ. ಒಟ್ಟು 30 ಮಂದಿ ಪ್ರಸಾದ ಸೇವಿಸಿದ್ದರು ಎನ್ನಲಾಗಿದೆ.

ಅಸ್ವಸ್ಥರನ್ನು ಚಿಂತಾಮಣಿಯ ಖಾಸಗಿ, ಕೋಲಾರದ ಜಾಲಪ್ಪ ಹಾಗೂ ಎಸ್‌ಎನ್‌ಆರ್‌ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚಿಂತಾಮಣಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪ್ರತಿ ಶುಕ್ರವಾರ ದೇವಸ್ಥಾನದಲ್ಲಿ ಪ್ರಸಾದವನ್ನು ಮಾಡುವ ಪದ್ಧತಿ ಇದೆ. ಚಿಂತಾಮಣಿ ನಗರದ ನರಸಿಂಹಪೇಟೆಯ ಗಂಗಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿದ್ದ 30 ಮಂದಿ ಪೈಕಿ 9 ಜನ ಅಸ್ವಸ್ಥರಾಗಿದ್ದಾರೆ. ಪ್ರಸಾದದ ಸ್ಯಾಂಪಲ್‌ನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಗಂಗಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Comments are closed.