ಕರ್ನಾಟಕ

ಆನಂದ್ ಸಿಂಗ್ ಪ್ರಕರಣ: ಶೀಘ್ರವೇ ಪಕ್ಷಕ್ಕೆ ವರದಿ ನೀಡುವೆ: ಡಿಸಿಎಂ ಡಾ.ಜಿ. ಪರಮೇಶ್ವರ್

Pinterest LinkedIn Tumblr

ಬೆಂಗಳೂರು: ಶಾಸಕ ಆನಂದ ಸಿಂಗ್ ಅವರು ನೀಡಿದ ದೂರಿನ‌ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಕಂಪ್ಲಿ ಶಾಸಕ ಗಣೇಶರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅವರನ್ನು ಈಗಾಗಲೇ‌ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ನನ್ನ ಅಧ್ಯಕ್ಷತೆಯಲ್ಲಿ‌ ಸಮಿತಿ ರಚಿಸಿದ್ದು, ಸೂಕ್ತ ತನಿಖೆ ನಡೆಸಿ ಪಕ್ಷಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದರು.

ಆನಂದ್ ಸಿಂಗ್ ಅವರ ಕಣ್ಣಿನ ಊತ ಕಡಿಮೆಯಾಗದ ಕಾರಣ ಪರೀಕ್ಷೆಗೆಂದು ನಾರಾಯಣ ನೇತ್ರಾಲಯಕ್ಕೆ ಇಂದು ಕರೆದೊಯ್ಯಲಾಯಿತು. ಅವರ ಕಣ್ಣಿನ ಪರೀಕ್ಷೆ ಮಾಡಿದ್ದು, ಕಣ್ಣು ನೋವು ಸಂಪೂರ್ಣವಾಗಿ ಗುಣಮುಖವಾಗಲು ಇನ್ನು ಒಂದೆರಡು ವಾರ ಬೇಕಾಗಬಹುದು. ಅವರ ಕಣ್ಣಿನ ನರಕ್ಕೆ ಯಾವುದೇ ತೊಂದರೆಯಾಗಿಲ್ಲ, ಕಣ್ಣಿನ ದೃಷ್ಟಿ ಚೆನ್ನಾಗಿದೆ ಎಂದರು.

Comments are closed.