ಕರ್ನಾಟಕ

ಮುಚ್ಚಿದ ಇಂದಿರಾ ಕ್ಯಾಂಟೀನ್‌’ಗೆ ಸೆಡ್ಡು ಹೊಡೆದಿದ್ದ ಅಪ್ಪಾಜಿ ಕ್ಯಾಂಟೀನ್‌

Pinterest LinkedIn Tumblr


ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರಕಾರದ ‘ಇಂದಿರಾ ಕ್ಯಾಂಟೀನ್‌’ಗೆ ಸೆಡ್ಡು ಹೊಡೆದು ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಜೆಡಿಎಸ್‌ ಕಚೇರಿ ಆವರಣದಲ್ಲಿ ಆರಂಭಿಸಿದ್ದ ‘ಅಪ್ಪಾಜಿ ಕ್ಯಾಂಟೀನ್‌’ ಬಾಗಿಲು ಮುಚ್ಚಿದೆ.

ಶೇಷಾದ್ರಿಪುರಂ ಫ್ಲಾಟ್‌ಫಾರಂ ರಸ್ತೆಯಲ್ಲಿರುವ ಪಕ್ಷದ ಕಚೇರಿ ‘ಜೆಪಿ ಭವನ’ದ ಆವರಣದಲ್ಲಿ ಸುಮಾರು 10 ತಿಂಗಳ ಹಿಂದೆ ‘ಅಪ್ಪಾಜಿ ಕ್ಯಾಂಟೀನ್‌’ ಆರಂಭಿಸಲಾಗಿತ್ತು. ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಕಡಿಮೆ ಬೆಲೆಗೆ ಊಟ ನೀಡುವುದು ಇದರ ಉದ್ದೇಶವಾಗಿತ್ತು.

10 ರೂ.ಗೆ ಮುದ್ದೆ, ಉಪ್ಪು ಸಾರು ಪೂರೈಸುವ ಮೂಲಕ ಹಸಿದ ಹೊಟ್ಟೆಗಳನ್ನು ತುಂಬಿಸುವ ಉದ್ದೇಶದೊಂದಿಗೆ ಜೆಡಿಎಸ್‌ ಮೇಲ್ಮನೆ ಸದಸ್ಯ ಟಿ.ಎ.ಶರವಣ ಈ ಕ್ಯಾಂಟೀನ್‌ ಆರಂಭಿಸಿದ್ದರು. ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ, ಸಾರ್ವಜನಿಕರಿಗೂ ಊಟೋಪಚಾರ ನಡೆಯುತ್ತಿತ್ತು.

ಕ್ಯಾಂಟೀನ್‌ ನಡೆಸಲು ಉಚಿತವಾಗಿ ಜಾಗ, ಕಟ್ಟಡ ನೀಡಲಾಗಿತ್ತು. ಆದರೆ, ಹಲವು ತಿಂಗಳಿಂದ ಬಿಲ್‌ ಪಾವತಿಸಿಲ್ಲದ ಕಾರಣ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗಿದ್ದು, ನಿರ್ವಹಣೆ ಕಷ್ಟಕರ ಎಂಬ ಕಾರಣಕ್ಕೆ ಕ್ಯಾಂಟೀನ್‌ ಬಂದ್‌ ಮಾಡಲಾಗಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

Comments are closed.