ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಬೈಕ್ ಸವಾರನನ್ನು ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ನೆಲಮಂಗಲ ತಾಲೂಕಿನ ಹ್ಯಾಡಾಳ್ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ರಾತ್ರಿ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ಬರುವಾಗ ಪೊಲೀಸ್ ಪೇದೆ ಸಿದ್ದರಾಜುವಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತ ನಡೆದು ಒಂದೂವರೆ ತಾಸಾದ್ರು ಸ್ಥಳಕ್ಕೆ ಆ್ಯಂಬುಲೆನ್ಸ್ ಬಂದಿರಲಿಲ್ಲ. ಸ್ಥಳೀಯರು ಕೂಡ ಗಾಯಾಳುವನ್ನು ರಕ್ಷಣೆ ಮಾಡುವ ಗೋಜಿಗೆ ಹೋಗಲಿಲ್ಲ.
ಇದೇ ವೇಳೆ ನೆಲಮಂಗಲ ಯಲಹಂಕ ನಡುವೆ ಓಡಾಡುವ ರೂಟ್ ನಂಬರ್ 407 ಬಿಎಂಟಿಸಿ ಬಸ್ ಚಾಲಕ ಗಂಗಾಧರ್ ಮತ್ತು ನಿರ್ವಾಹಕ ಶ್ರೀನಿವಾಸ್ ಗಾಯಾಳು ಸಿದ್ದರಾಜನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Comments are closed.