ಕರ್ನಾಟಕ

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ನನಗೆ ಅಘಾತ ತಂದಿದೆ: ಡಿಸಿಪಿ ಅಣ್ಣಾಮಲೈ

Pinterest LinkedIn Tumblr

ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿರುವ ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರು ಮಧುಕರ್ ಶೆಟ್ಟಿಯಂತ ಖಡಕ್ ಅಧಿಕಾರಿ ನಿಧನ ನನಗೆ ಅಘಾತ ತಂದಿದೆ ಎಂದರು.

ಮಧುಕರ್ ಶೆಟ್ಟಿ ಒಬ್ಬ ದಕ್ಷ ಅಧಿಕಾರಿ. ಈ ರೀತಿ ಸಿಗಲು ಸಾಧ್ಯವಿಲ್ಲ. ಚಿಕ್ಕಮಗಳೂರಿಗೆ ಅವರ ನೀಡಿದ ಸೇವೆ ಅಭೂತಪೂರ್ವ. ನನಗೆ ಈಗಲೂ ನೆನಪಿದೆ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಅವರು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು. ಅವರ ದಕ್ಷತೆ ನಿಜಕ್ಕೂ ಅದ್ಭುತ ಎಂದು ಹೇಳಿದರು.

ಇನ್ನು ಡೈಲನ್ ಥಾಮಸ್ ಹೇಳಿದ್ದನ್ನ ನೆನೆದ ಅಣ್ಣಾಮಲೈ, Rage, rage against the dying of the light and do not go gentle into the good night” ಎಂದರು. ನೀವು ಹಾಗೆ ಹೋಗಿಲ್ಲ, ನಮ್ಮೊಡನೆ ಮಾದರಿಯಾಗಿ ಹೋಗಿದ್ದೀರಾ. ನಿಮ್ಮ ನಿರ್ಧಾರ, ನಿಮ್ಮ ಆಲೋಚನೆಗಳನ್ನೆಲ್ಲಾ ನಮಗೆ ನೀಡಿ ಹೋಗಿದ್ದೀರಾ. ನಾವು ನಿಮ್ಮ ದಾರಿಯಲ್ಲೇ ಸಾಗುವೆವು ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.

47 ವರ್ಷದ ಮಧುಕರ್ ಶೆಟ್ಟಿ ಅವರು ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದು ಹೈದರಾಬಾದ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದರು.

Comments are closed.