ಕರ್ನಾಟಕ

ವಿವಾಹ ಪ್ರಸ್ತಾಪಕ್ಕೆ ಬೇಸತ್ತು ಅಪ್ರಾಪ್ತ ಯುವತಿ ಮಾಡಿದ್ದೇನು?

Pinterest LinkedIn Tumblr


ಬೆಂಗಳೂರು: ಪೋಷಕರು ಮದುವಿ ವಿಷಯ ಪ್ರಸ್ತಾಪಿಸಿದ್ದಕ್ಕೆ ನೊಂದ ಅಪ್ರಾಪ್ತ ಯುವತಿ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ರಾತ್ರಿ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ.

ಶ್ರಾವಣಿ (17) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ನಾಗಮಣಿ ಹಾಗೂ ಚಂದ್ರಶೇಖರ್ ದಂಪತಿ ತಮ್ಮ ಪುತ್ರಿ ಎದುರು ವಿವಾಹ ಪ್ರಸ್ತಾಪವನ್ನಿಟ್ಟಿದ್ದರು. ಒಂದು ವೇಳೆ ತಾವು ನೋಡಿದ ವರ ಅವಳಿಗೆ ಇಷ್ಟವಾದರೆ, 18 ವರ್ಷ ತುಂಬಿದ ಬಳಿಕ ವಿವಾಹ ನೆರವೇರಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ, ಇಷ್ಟು ಬೇಗ ವಿವಾಹವಾಗುವುದಿಲ್ಲ ಹಠ ಹಿಡಿದ ಯುವತಿ, ಆತುರದ ನಿರ್ಧಾರ ಕೈಗೊಂಡ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಯುವತಿಯ ಪೋಷಕರು ಚಿಕ್ಕಬಳ್ಳಾಪುರದ ಚಿಂತಾಮಣಿಗೆ ಹೋಗಿದ್ದು, ಸಂಜೆ 7 ಗಂಟೆ ಸುಮಾರಿಗೆ ವಾಪಸ್ಸಾಗಿದ್ದರು. ಈ ವೇಳೆ ಸಂಬಂಧಿಕರೊಬ್ಬರು ವಿವಾಹ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆಂದು ಪುತ್ರಿ ಬಳಿ ಹೇಳಿಕೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಯುವತಿ ತಮ್ಮ ಮನೆಯ ಎರಡನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

Comments are closed.