ಕರ್ನಾಟಕ

ಸದನದಲ್ಲಿ ಯುವತಿಯ ಫೋಟೋ ವೀಕ್ಷಿಸಿದ ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟನೆ

Pinterest LinkedIn Tumblr


ಬೆಳಗಾವಿ: ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ ಎಂದು ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್ ಮಹೇಶ್ ಅವರು, ನಾನು ಸುಮ್ಮನೆ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಇವತ್ತು ಸದನದಲ್ಲಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ. ಆದರೆ ಯಾವುದೇ ಕಾರಣವಿದ್ದರು ಮೊಬೈಲ್ ತಂದಿದ್ದು ನನ್ನ ತಪ್ಪು ಅಂತಾ ಹೇಳಿದರು.

ಇದೇ ವೇಳೆ ವಾಟ್ಸಾಪ್ ನಲ್ಲಿ ಯುವತಿಯ ಫೋಟೋ ವಿಕ್ಷೀಸಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗನಿಗೆ ಮದುವೆ ಸಿದ್ಧತೆಯಲ್ಲಿದ್ದು, ಈ ಬಗ್ಗೆ ಸೂಕ್ತ ವಧುವಿನ ಬಗ್ಗೆ ಮಾಹಿತಿ ನೀಡಲು ನನ್ನ ಸ್ನೇಹಿತ ಶಿವಕುಮಾರ್ ಎಂಬವರಿಗೆ ಮಾಹಿತಿ ನೀಡಿದ್ದೆ. ಅವರು ಕಳುಹಿಸಿದ ಫೋಟೋಗಳನ್ನೆ ನಾನು ನೋಡಿದ್ದು. ಆದರೆ ಅದನ್ನು ಪ್ರಸಾರ ಮಾಡಿದ್ದು, ವೃತ್ತಿ ಧರ್ಮ ಅಲ್ಲ ಎಂದರು.

Comments are closed.