ಕರ್ನಾಟಕ

ಕೆಲಸ ಕೊಡಿಸಿ, ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ

Pinterest LinkedIn Tumblr


ಬೆಂಗಳೂರು: ಕೆಲಸ ಕೊಡಿಸಿ, ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಯುವತಿಯನ್ನು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ದಾವಣಗೆರೆ ಮೂಲದ ಸೋಮನಾಥ್​ ವಂಚಿಸಿದ ಆರೋಪಿ. ತನ್ನೂರಿನ ಅನ್ಯಧರ್ಮಿಯ ಯುವತಿಯೊಂದಿಗೆ ಪ್ರೀತಿ ಮಾಡುತ್ತಿರುವುದಾಗಿ ನಂಬಿಸಿದ್ದಾನೆ. ಈತನ ಪ್ರೀತಿಯನ್ನು ನಂಬಿದ ಯುವತಿ ದಾವಣಗೆರೆ ತೊರೆದು ಸಿಲಿಕಾನ್​ ಸಿಟಿಗೆ ಬಂದಿದ್ದಾಳೆ.

ಈತನನ್ನು ನಂಬಿದ ಯುವತಿ ಹೆತ್ತವರಿಗೂ ತಿಳಿಸದೆ ಊರು ತೊರೆದು ಬಂದಿದ್ದಅಳೆ. ಈಕೆಗೆ ಆರೋಪಿಯೇ ಬಸವೇಶ್ವರ್​ನಗರದಲ್ಲಿ ಪಿ.ಜಿಯೊಂದರಲ್ಲಿ ಇರಿಸಿದ್ದಾನೆ. ಕೆಲಸ ಹುಡುಕಿಕೊಂಡುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮದುವೆಯಾಗುವ ನಂಬಿಕೆ ಮೇಲೆ ಯುವತಿ ಕೂಡ ಆತನನ್ನು ನಂಬಿದ್ದಾಳೆ. ಅತ್ತಿಗುಪ್ಪೆಯಲ್ಲಿರುವ ತನ್ನ ಅಣ್ಣನ ಮನೆಗೆ ಕರೆದುಕೊಂಡು ಹೋಗಿ ಆರೋಪಿ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಕಡೆಗೆ ಈತನ ಮೋಸ ಅರಿವಾದ ಯುವತಿ ಚಂದ್ರಲೇಔಟ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಯುವತಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Comments are closed.