ಕರ್ನಾಟಕ

ಸೀರೆಯಿಂದ ಕಟ್ಟಿದ ತೂಗುಯ್ಯಾಲೆಗೆ ಸಿಲುಕಿ ಪ್ರಾಣ ಕಳೆದುಕೊಂಡ ಬಾಲಕಿ!

Pinterest LinkedIn Tumblr


ಬಳ್ಳಾರಿ ( ನ.30) : ಸೀರೆಯಿಂದ ಕಟ್ಟಿದ ತೂಗುಯ್ಯಾಲೆಯಲ್ಲಿ ಹಾಯಾಗಿ ಆಟವಾಡಲು ಹೋಗಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟಿರುವ ಬಾಲಕಿಯನ್ನು ಪರ್ವಿನ್ ಬೇಗಂ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಊಟ ಮಾಡುವ ಮುನ್ನ ಮನೆಯಲ್ಲಿಯೇ ಮೇಲಿನ ಜಂತಿಗೆ ಅಳವಡಿಸಿದ್ದ ಸೀರೆಯಲ್ಲಿ ತೂಗುಯ್ಯಾಲೆ ಆಡಲು ಹೋಗಿ ಜೀವ ಕಳೆದುಕೊಂಡಿದ್ದಾಳೆ. ಸೀರೆಯನ್ನು ಸುತ್ತಲೂ ಸುತ್ತಿಸಿಕೊಂಡು ರಿವರ್ಸ್ ಸ್ಟೈಲ್​ನಲ್ಲಿ ಬಿಟ್ಟಿದ್ದರಿಂದ ಅತಿ ವೇಗದಲ್ಲಿ ತಿರುಗಿದೆ. ಈ ಸಂದರ್ಭದಲ್ಲಿ ಸೀರೆ ಕುತ್ತಿಗೆಗೆ ಸಿಲುಕಿ, ಇಲ್ಲವೇ ಸೀರೆಯೊಳಗೆ ಸಿಲುಕು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಮನೆಯವರು ಹೇಳುತ್ತಿದ್ದಾರೆ.

ಸಿರುಗುಪ್ಪ ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ಏಳನೇ ತರಗತಿಯಲ್ಲಿಓದುತ್ತಿದ್ದ ವಿದ್ಯಾರ್ಥಿನಿ ಪರ್ವಿನ್ ಬೇಗಂ, ವಿದ್ಯಾಭ್ಯಾಸದಲ್ಲಿಯೂ ಚುರುಕಾಗಿದ್ದಳು. ಆಟ, ಪಾಠದಲ್ಲಿಯೂ ಯಾವಾಗಲೂ ಮುಂದಿದ್ದ ಪರ್ವೀನ್ ಬೇಗಂ ಮನೆಯಲ್ಲೇ ಅದೆಷ್ಟೇ ಬಡತನವಿದ್ದರೂ ಕಷ್ಟಪಟ್ಟು ಓದುತ್ತಿದ್ದಳು ಎನ್ನಲಾಗಿದೆ.

ಡ್ರೈವರ್ ಕೆಲಸ ಮಾಡುತ್ತಿದ್ದ ಪರ್ವಿನ್ ಬೇಗಂ ತಂದೆ ಚಾಂದ್ ಬಾಷ್ ಸಾವನ್ನಪ್ಪಿದ ಮೇಲಂತೂ ಮನೆಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಇಂಥ ಸ್ಥಿತಿಯಲ್ಲಿ ಇದ್ದೊಬ್ಬ ಮಗಳು ನಂಬಲು ಸಾಧ್ಯವಾದ ರೀತಿ ಮೃತರಾಗಿರುವುದು ಮನೆಮಂದಿಯನ್ನೆಲ್ಲ ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿದೆ. ಆಟವಾಡುವ ಸಂದರ್ಭದಲ್ಲಿಯೂ ಸಣ್ಣ ಚೇಷ್ಟೆ ಜೀವವನ್ನೇ ತೆಗೆದುಕೊಂಡು ಹೋಗಿಬಿಟ್ಟಿರುವುದು ದುರ್ದೈವದ ಸಂಗತಿ. ಈ ಘಟನೆಯು ಇತರ ಪಾಲಕರಿಗೆ ಒಂದು ಪಾಠವಾಗಲಿ ಎಂದು ಆಶಿಸೋಣ.

Comments are closed.