ಬೆಂಗಳೂರು: ನಿನ್ನೆಯ ಬಿಬಿಎಂಪಿ ಮೇಯರ್ ಗಿರಿ ಕಾಂಗ್ರೆಸ್ ಕೈ ಸೇರಿದ್ದಕ್ಕೆ ಅಸಲಿ ಕಾರಣ ಏನು ಗೊತ್ತಾ..? ಮತ್ತೆ ಆಪರೇಷನ್ ಕಮಲ ವಿಫಲವಾಗಿ ಯಾಕೆ.? ಯಡಿಯೂರಪ್ಪ ಆಸೆಗೆ ಸೋಲು ಆಗಿದ್ದೇಗೆ..? ಆ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ.
ಬಿಬಿಎಂಪಿ ಚುನಾವಣೆಯಲ್ಲಿ ಮೇಯರ್ ಗಿರಿಯನ್ನು ಗಂಗಾಬಿಕಾ ಮಲ್ಲಿಕಾರ್ಜುನ್ ಅಲಂಕರಿಸಿ ರಾತ್ರಿ ಬಿಬಿಎಂಪಿ ಕಂಂಟ್ರೋಲ್ ರೂಂಗೂ ಭೇಟಿ ಕೊಟ್ಟು ಡ್ಯೂಟಿ ಶುರು ಮಾಡಿದ್ದಾರೆ. ಆದರೆ ಬಿಜೆಪಿ ಕುರ್ಚಿ ಕಳೆದುಕೊಂಡಿದ್ದು ಯಾಕೆ ಅಂತ ಹುಡುಕಿದಾಗ ಗೊತ್ತಾಗಿದ್ದು ಬಿಜೆಪಿಯ ಇಬ್ಬರು ನಾಯಕರ ಒಳಜಗಳ. ಅವರೇ ಆರ್.ಅಶೋಕ್ ಹಾಗೂ ಅರವಿಂದ ಲಿಂಬಾವಳಿ.
ಬಿಜೆಪಿ ಸೋಲಿಗೆ ಬಿಜೆಪಿಯೇ ಕಾರಣ!
ಮೇಯರ್ ಸ್ಥಾನಕ್ಕೆ ಆರ್.ಅಶೋಕ್ ಬೆಂಬಲಿತ ಶೋಭಾ ಆಂಜಿನಪ್ಪ ಆಯ್ಕೆ ಆಗಿದ್ದರು. ಅರವಿಂದ ಲಿಂಬಾವಳಿಗೂ ತಿಳಿಯದಂತೆ ಪ್ಲ್ಯಾನ್ ಮಾಡಿದ್ದ ಆರ್.ಅಶೋಕ್ ಹಾಗೂ ತಂಡ ಶಾಸಕ ಸತೀಶ್ ರೆಡ್ಡಿ, ಪದ್ಮನಾಭ ರೆಡ್ಡಿಯನ್ನು ಮುಂದೆ ಬಿಟ್ಟು ಕಾರ್ಯ ರೂಪಿಸಿತ್ತು. ಜೆಡಿಎಸ್, ಕಾಂಗ್ರೆಸ್ ಸದಸ್ಯರನ್ನ ಹೈಜಾಕ್ ಮಾಡಿದರೂ ಒಗ್ಗಟ್ಟಿನ ಕೊರತೆ ಶುರುವಾಗಿತ್ತು. ಇತ್ತ ಕೊನೆ ಕ್ಷಣದಲ್ಲಿ ಸಿಎಂ ಮಾತಿಗೆ ಕಟ್ಟುಬಿದ್ದು ಪಕ್ಷೇತರ ಪಾಲಿಕೆ ಸದಸ್ಯರು ಕೈಕೊಟ್ಟಿದ್ದರು. ಆ ಮೂಲಕ 4ನೇ ಬಾರಿಗೆ ಅಶೋಕ್ ಎಡವಿಬಿದ್ದರು. ಕಳೆದ ಬಾರಿ ಮೇಯರ್ ಗಿಟ್ಟಿಸುವ ಭರವಸೆ ಕೊಟ್ಟು ಸೋಲುಂಡಿದ್ದರು. ಬಿಎಸ್ವೈ ಪರಿವರ್ತನಾ ಯಾತ್ರೆಗೆ ಜನ ಸೇರಿಸದೇಯೂ ಸೋಲು ಅನುಭವಿಸಿದ್ದರು. ಈಗ ಆಪರೇಷನ್ ಕಮಲಕ್ಕೆ ಕೈ ಹಾಕಿ ಮತ್ತೆ ಸೋಲು ಕಂಡಿದ್ದಾರೆ. ಲಿಂಬಾವಳಿ ಬಿಟ್ಟು ರಣತಂತ್ರ ಹೆಣೆದು ಬಿಬಿಎಂಪಿಯಲ್ಲಿ ಮತ್ತೆ ಮತ್ತೆ ಸೋಲಾಗಿದೆ.
ಇಷ್ಟಾದ್ರೂ ಆರ್.ಅಶೋಕ್ ಕಾಂಗ್ರೆಸ್ ನಾಯಕರ ಮೇಲೆ ಗೂಬೆ ಕೂರಿಸಿದರು.
ಇಲ್ಲಿ ನಮಗೆ ಬೆಂಬಲ ಇರಲಿಲಲ್. ನಿಮಗೆಲ್ಲಾ ಗೊತ್ತೇ ಇರುವಂತೆ ನಾವು ಬೆಂಬಲ ಮಾಡಿ ನಮ್ಮ ಪ್ರಯತ್ನ ಮಾಡಿದ್ದೇವೆ. ಸಫಲ ಆಗಿದ್ದೆವು. ಆದರೆ ಇಂದು ಗೂಂಡಾಗಿರಿ ಮಾಡಿ ಅವರು(ಕಾಂಗ್ರೆಸ್) ನಮ್ಮ ಬೆಂಬಲಕ್ಕಿದ್ದ ಅಭ್ಯರ್ಥಿಗಳನ್ನು ಹೊತ್ತೊಯ್ದಿದ್ದಾರೆ. ಹೀಗಾಗಿ ಅವರು ಸಫಲರಾಗಿದ್ದಾರೆ. ಹೀಗಾಗಿ ಹೇಳಿಕೊಳ್ಳುವಂತಹ ಸಾಧನೆ ಅವರೇನೂ ಮಾಡಿಲ್ಲ. ಇಷ್ಟೆಲ್ಲಾ ಬೆಂಬಲ ಇದ್ದರೂ ರೆಸಾರ್ಟ್ಗೆಲ್ಲಾ ಹೋಗಿ ಬಂದಿದ್ಧಾರೆ. ಇನ್ನು ಮುಂದೆ ವಿರೋಧ ಪಕ್ಷವಾಗಿ ನಾವು ಅವರ ವಿರುದ್ಧ ಹೋರಾಟ ನಡೆಸುತ್ತೇವೆ
— ಆರ್. ಅಶೋಕ್, ಬಿಜೆಪಿ ನಾಯಕ
ಟಾರ್ಗೆಟ್ ಬೆಂಗಳೂರು 2019ಕ್ಕೆ ಹಿನ್ನಡೆ: ಹಾಲಿ ಮೂವರು ಸಂಸದರಿಗೆ ತಳಮಳ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಗೆಲ್ಲಬೇಕು. ಅದಕ್ಕೆ ಬಿಬಿಎಂಪಿ ಚುಕ್ಕಾಣಿ ಹಿಡಿಯಬೇಕು ಅಂತ ಆರ್. ಅಶೋಕ್ಗೆ ಜವಬ್ದಾರಿ ಕೊಟ್ಟಿತ್ತು ಆದರೆ ಅರವಿಂದ ಲಿಂಬಾವಳಿ ಜೊತೆ ನೀಡಲಿಲ್ಲ. ಈಗ ಬೆಂಗಳೂರಿನ 3 ಲೋಕಸಭೆ ಚುನಾವಣೆ ಕತೆ ಏನು ಎನ್ನುವ ತಳಮಳ ಕಮಲದ ಕಲಿಗಳಲ್ಲಿ ಶುರುವಾಗಿದೆ.
Comments are closed.