ಬೆಂಗಳೂರು: ನಟ ಅರ್ಜುನ್ ಸರ್ಜಾ ತಮ್ಮ ನಿರ್ದೇಶನದ ಪ್ರೇಮಬರಹ ಚಲನಚಿತ್ರ ವಿತರಕ ಮಲ್ಲಿಕಾರ್ಜುನ್ನಿಂದ ಕೋಟಿಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ.
ಮಲ್ಲಿಕಾರ್ಜುನ್ ನಟ ದರ್ಶನ್ಗೆ ಪರಮಾಪ್ತ. ಈತ ಪ್ರೇಮಬರಹ ಚಿತ್ರದ ವಿತರಣೆ ಹೊಣೆ ಹೊತ್ತಿದ್ದ. ಆದರೆ ಅದರಿಂದ ಬಂದ ದುಡ್ಡನ್ನು ಅರ್ಜುನ್ ಸರ್ಜಾಗೆ ನೀಡದೆ ನಾಪತ್ತೆಯಾಗಿದ್ದಾರೆ. ಫೋನ್ಗೂ ಸಿಗುತ್ತಿಲ್ಲ. ದರ್ಶನ್ ಹಾಗೂ ಅರ್ಜುನ್ ಸರ್ಜಾ ಇಬ್ಬರೂ ಹತ್ತಿರದ ಒಡನಾಡಿಗಾಳಿದ್ದಾರೆ. ಇದೇ ಕಾರಣಕ್ಕೆ ಅರ್ಜುನ್ ಸರ್ಜಾ ಇನ್ನೂ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.
ಈ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿರು ಅರ್ಜುನ್ ಸರ್ಜಾ, ನಂಬಿಕೆಯಿಂದ ಕೊಟ್ಟರೆ ಹೇಳದೆ ಕೇಳದೆ ನಾಪತ್ತೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ್ ದರ್ಶನ್ ಅವರ ಆಪ್ತರಾಗಿದ್ದು ತೂಗುದೀಪ್ ಡಿಸ್ಟ್ರಿಬ್ಯೂಷನ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಅವರಿಗೆ ಅನುಕೂಲವಾಗಲಿ ಎಂದು ದರ್ಶನ್ ಹೋಟೆಲ್ ಇಟ್ಟುಕೊಟ್ಟಿದ್ದರು. ಆದರೆ ಸಾಲ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ್ ಹೆಚ್ಚು ಜನರ ಬಳಿ ಎರಡು ಲಕ್ಷ, ಮೂರು ಲಕ್ಷ ಕೈಗಡ ಪಡೆದಿದ್ದೇ ಹೆಚ್ಚು. ಕೊಟ್ಟವರೆಲ್ಲ ದರ್ಶನ್ ಮ್ಯಾನೇಜರ್ ಎಂಬ ನಂಬಿಕೆಯಿಂದಲೇ ಕೊಟ್ಟಿದ್ದರು. ಆದರೆ ಈಗ ಹಿರಿಯ ನಟ ಅರ್ಜುನ್ ಸರ್ಜಾಗೂ ವಿತರಣೆಯ ಹಣ ನೀಡದೆ ನಾಪತ್ತೆಯಾಗಿದ್ದಾರೆ.
Comments are closed.