ಕರ್ನಾಟಕ

ಗೌರಿ ಲಂಕೇಶ್ ಹತ್ಯೆ, ಬದುಕಿನ ಚಿತ್ರಣ ಕೃತಿ ಹೊರತಂದ ಮಾಜಿ ಪತಿ

Pinterest LinkedIn Tumblr


ಬೆಂಗಳೂರು : ಪತ್ರಕರ್ತ ಮತ್ತು ಲೇಖಕ ಚಿದಾನಂದ ರಾಜ್ ಘಟ್ಟ ತಾವು ಬರೆದ ‘ಇಲ್ಲಿಬರಲ್ ಇಂಡಿಯಾ: ಗೌರಿ ಲಂಕೇಶ್ ಆಂಡ್ ದಿ ಏಜ್ ಆಫ್ ಅನ್ ರೀಸನ್’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಇದನ್ನು ವೆಸ್ಟ್ ಲ್ಯಾಂಡ್ ಅವರು ತಮ್ಮ ಹೊಸ ಸಾಹಿತ್ಯಕ ಮುದ್ರೆ ಅಡಿಯಲ್ಲಿ ಬೆಂಗಳೂರಿನ ಹಿಗ್ಗಿನ್ ಭಾಥಮ್ಸ್ ನಲ್ಲಿ ಪ್ರಕಟಿಸಿದ್ದಾರೆ.

ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ಚಿದಾನಂದ ರಾಜ್ ಘಟ್ಟ, ವಾಸಂತಿ ಹರಿಪ್ರಕಾಶ್, ಪಿಕಲ್ ಜಾರ್ ಸಂಸ್ಥಾಪಕರು ಮತ್ತು ಪತ್ರಕರ್ತೆ ಪ್ರೀತಿ ನಾಗರಾಜ್ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.

ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ-ಸ್ಥಾನಮಾನಗಳನ್ನು ನೀಡಬೇಕೆಂಬ ಕಠಿಣ ನಿಲುವು ಹೊಂದಿರುವ ಗೌರಿ ಲಂಕೇಶ್ ಬಗ್ಗೆ, ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಸಾಕಷ್ಟು ಮಂದಿ ಹಿಗ್ಗಿನ್ ಭಾಥಮ್ಸ್ ನಲ್ಲಿ ನೆರೆದಿದ್ದರು. ಕರ್ನಾಟಕ ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಹಿಂದುತ್ವ ಧೋರಣೆಯ ಪ್ರಬಲ ವಿರೋಧಿಯಾಗಿದ್ದ ಗೌರಿ ಲಂಕೇಶ್ ಅವರು 2017ರ ಸೆಪ್ಟೆಂಬರ್ 5ರಂದು ಹತ್ಯೆಗೀಡಾದರು. ಎಂ.ಎಂ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ ಹಾಗೂ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ಶೈಲಿಯಲ್ಲೇ ಗೌರಿ ಹತ್ಯೆಯೂ ನಡೆದಿತ್ತು.

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಾನಂದ್ ರಾಜ್ ಘಟ್ಟ ಅವರು ಭಾರತವು ‘ಇಲ್ಲಿಬರಲ್’ ಆಗಿದೆಯೇ ನೀವು ಸಾಮಾಜಿಕ ಸ್ಥರದಲ್ಲಿ ಎಲ್ಲಿ ನಿಂತಿದ್ದೀರಿ ಎಂಬುದರ ಮೇಲೆ ಇದರ ಉತ್ತರ ಅವಲಂಬಿತವಾಗಿರುತ್ತದೆ. ಇದು ಬಿಳಿಯ ಅಮೆರಿಕನ್ನರನ್ನು ವರ್ಣಬೇಧದ ಬಗ್ಗೆ ಕೇಳಿದಂತೆ. ಅವರನ್ನು ವರ್ಣಬೇಧದ ಬಗ್ಗೆ ಪ್ರಶ್ನಿಸಿದರೆ ಅಮೆರಿಕದಲ್ಲಿ ವರ್ಣಬೇಧ ಇಲ್ಲ ಎಂದೇ ಹೇಳುತ್ತಾರೆ. ಒಂದು ಮಹಿಳೆ ಎದ್ದು ನಿಂತು ತನ್ನ ಆಲೋಚನೆಗಳನ್ನು ಮುಕ್ತವಾಗಿ ಮಾತನಾಡಿದರೆ, ಅದನ್ನು ಸಹಿಸದ ಎಷ್ಟೋ ಜನ ಇರುತ್ತಾರೆ. ಲಿಂಗಾಯಿತ ಎನ್ನುವುದು ಭ್ರಷ್ಟವಾಗುತ್ತಿದೆ. ಧರ್ಮ ವ್ಯಾಪಾರವಾಗುತ್ತಿದೆ ಎನ್ನುವ ವಿಷಯವೇ ಆಕೆಯನ್ನು ಬಾಧಿಸುತ್ತಿದ್ದುದು. ಅದನ್ನೇ ಆಕೆ ಧೈರ್ಯವಾಗಿ ಮಾತನಾಡಿದ್ದು ಎಂದಿದ್ದಾರೆ.

Comments are closed.