ಮೈಸೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತುವುದಾಗಿ ಹರಕೆ ಹೊತ್ತಿದ್ದ ಅಂಗವಿಕಲ ಮಹಿಳೆ ಭಾನುವಾರ ಹರಕೆ ಸಲ್ಲಿಸಿದರು.
ಕಲಬುರುಗಿ ಮೂಲದ ಸಂಗೀತಾ 2006ರಲ್ಲಿ ಜನತಾದರ್ಶನದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು. ಅಂಗವಿಕಲ ಕೋಟಾದಡಿ ಆಕೆಗೆ ಎಚ್ಡಿಕೆ ಉದ್ಯೋಗಕ್ಕೆ ನೆರವು ನೀಡಿದ್ದರು. ಅಲ್ಲಿಂದ ಆಕೆ ಕುಮಾರಸ್ವಾಮಿ ಅಭಿಮಾನಿಯಾಗಿದ್ದರು. ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಸಂಗೀತಾ, ಇನ್ನೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಈಗ ಮತ್ತೆ ಎಚ್ಡಿಕೆ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಕುಟುಂಬದವರ ಜತೆ ಬೆಟ್ಟ ಹತ್ತಿ ಹರಕೆ ತೀರಿಸಿದ್ದಾರೆ.
Comments are closed.