ಕರ್ನಾಟಕ

ಶಿರಾ ಬಳಿ ನಿಂತ ಲಾರಿಗೆ ಬಸ್ ಡಿಕ್ಕಿ ; 8 ಮಂದಿ ಸಾವು, 20 ಮಂದಿಗೆ ಗಾಯ

Pinterest LinkedIn Tumblr

ತುಮಕೂರು; ನಿಂತಿದ್ದ ಲಾರಿಯೊಂದಕ್ಕೆ ಯಾತ್ರಾರ್ಥಿಗಳಿದ್ದ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಹೆದ್ದಾರಿ ಎಡ ಭಾಗದಲ್ಲಿ ನಿಂತಿದ್ದ ಲಾರಿಗೆ ಇಂಡಿಕೇಟರ್ ಹಾಕಿರಲಿಲ್ಲ. ಅತೀ ವೇಗದಲ್ಲಿ ಬಂದ ಹನುಮಾನ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಇದಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಸವಿತಾ ಸೋಮಶೇಖರ್(21), ಅನುಷಾ(7), ರತ್ನಮ್ಮ ಕುಮಾರ್ (39), ಸುಮಲತಾ ಲಿಂಗರಾಜು(21), ಗಿರಿಜಮ್ಮ ದೇವರಾಜು(55), ಶಿರಾ ಜ್ಯೋತಿನಗರದ ಶಂಕರ್ ಈಶ್ವರಪ್ಪ(38) ,ಅಶ್ವತ್ಥ್ ನಾರಾಯಣ (40) ಮೃತಪಟ್ಟಿದ್ದಾರೆ. 16 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲರೂ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ಮೇ 19ರಂದು ತೆರಳಿದ್ದರು. ಮೇ 20 ರಂದು ರಾತ್ರಿ ಹಿಂದಿರುಗಿ ಬರುತ್ತಿದ್ದರು. ಶಿರಾ ನಗರ ತಲುಪಲು 3 ಕಿ.ಮೀ ದೂರ ಇದ್ದಾಗ ಅಪಘಾತ ಸಂಭವಿಸಿದೆ.

ಗಾಯಾಳುಗಳು : 1) ಭೂತಣ್ಣ, 2)ರಂಗಪ್ಪ 3)ಶಾಂತಮ್ಮ, 4)ಭಾರತಿ, 5) ಯಶೋಧರ, 6) ಅನ್ನಪೂಣೇ೯ಶ್ವರಿ, 7) ಜ್ಯೋತಿ, 8) ವೀರಭದ್ರಯ್ಯ, 9) ನಂಜಮ್ಮ, 10) ಪದ್ಮಮ್ಮ, 11) ಕೆಂಚಮ್ಮ 12) ಅಜೇಯ 13) ತಿಪ್ಪೇಸ್ವಾಮಿ 14) ನಾಗಮಣಿ 15) ರಂಗನಾಥ 16) ಸೋಮಶೇಖರ್.

Comments are closed.