ಕರ್ನಾಟಕ

ಮುಳ್ಳುಹಂದಿ ತನ್ನ ಮೇಲೆ ತಾನೇ ಉಗಿದುಕೊಳ್ಳುವುದೇಕೆ?

Pinterest LinkedIn Tumblr


“ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು’ ಎಂದು ಹಿರಿಯರು ಹೇಳಿರುವರು. ಬಹುಶಃ ಇದೇ ಹೇಳಿಕೆಯಿಂದ ಪ್ರೇರಣೆಗೊಂಡ ಮುಳ್ಳುಹಂದಿ ಇನ್ನೊಬ್ಬರಿಂದ ಉಗಿಸಿಕೊಳ್ಳುವುದಕ್ಕಿಂತ ಆ ಕೆಲಸವನ್ನು ತಾನೇ ಮಾಡಿಕೊಳ್ಳುವುದು ಉತ್ತಮ ಎಂದು ಭಾವಿಸಿತೋ ಏನೋ! ಇದೇ ಸರಿಯುತ್ತರ ಎಂದು ತಿಳಿಯಬೇಡಿ.

ಮುಳ್ಳುಹಂದಿಗೆ ಅಷ್ಟೊಂದು ಸೈದ್ಧಾಂತಿಕ ಮಟ್ಟದ ಜ್ಞಾನ ಇದ್ದಿರಬಹುದಾದ ಸಾಧ್ಯತೆ ಕಮ್ಮಿಯಲ್ಲ, ಇಲ್ಲವೇ ಇಲ್ಲ! ಮುಳ್ಳುಹಂದಿಗಳು ತಮ್ಮ ದೇಹದಲ್ಲಿನ ದುರ್ವಾಸನೆಯನ್ನು ತೊಡೆದುಹಾಕಲು ತಮ್ಮನ್ನು ತಾವೇ ಉಗಿದುಕೊಳ್ಳುತ್ತವೆ. ಈ ಉತ್ತರ ಹಿಡಿಸದಿದ್ದ ಪಕ್ಷದಲ್ಲಿ ಅಂಥ ಮಡಿವಂತ ಮುಳ್ಳುಹಂದಿಗಳು ಈ ರೀತಿಯಾಗಿ ಓದಿಕೊಳ್ಳಬೇಕು- ಕೆಮಿಕಲ್‌ ಡಿಯೋಡರೆಂಟ್‌ಗಳನ್ನು ಬಳಸಲಿಚ್ಛಿಸದ ಮುಳ್ಳುಹಂದಿಗಳು ತಮ್ಮ ಎಂಜಲನ್ನು ತಮ್ಮ ಮೇಲೆಯೇ ಪ್ರೇಕ್ಷಿಸಿಕೊಳ್ಳುತ್ತವೆ. ಅಸಲಿಗೆ ಶತ್ರುಗಳು ತಮ್ಮ ಬಳಿ ಸುಳಿಯದಿರಲೆಂದು ಮುಳ್ಳುಹಂದಿಗಳು ಈ ಉಪಾಯ ಹೂಡುವುದು. ಹೀಗೆ ಮಾಡಿದರೆ ಶತ್ರುಗಳು ಹೋಗಲಿ, ಯಾವ ಮಿತ್ರ ತಾನೇ ಬಳಿಗೆ ಬಂದಾನು ಹೇಳಿ? ಶತ್ರುವನ್ನು ದೂರವಿಡಲು ಇದುವೇ ಸರಿಯಾದ ಮಾರ್ಗವಾಗಿದ್ದಿದ್ದರೆ ದೇಶ, ದೇಶಗಳ ನಡುವೆ ಗನ್ನು, ಬಾಂಬುಗಳ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ಈ “ಸ್ವಯಂ ಎಂಜಲು ಪ್ರೋಕ್ಷನ’ ಮಾತ್ರದಿಂದ ಸಾವು ನೋವಿಲ್ಲದೆ ಮಹಾಯುದ್ಧಗಳು ಕೊನೆಗೊಳ್ಳುತ್ತಿದ್ದವು ಎನ್ನಿ!

-ಉದಯವಾಣಿ

Comments are closed.