ಕರ್ನಾಟಕ

ಮಹಮ್ಮದ್​ ನಲಪಾಡ್ ಪತ್ತೆಗೆ 2 ವಿಶೇಷ ತಂಡ ರಚಿಸಲಾಗಿದೆ: ರಾಮಲಿಂಗಾರೆಡ್ಡಿ

Pinterest LinkedIn Tumblr


ಬೆಂಗಳೂರು: ಯುವಕನ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಶಾಂತಿನಗರ ಶಾಸಕ ಎನ್​.ಎ. ಹ್ಯಾರಿಸ್​ ಪುತ್ರನ ಪತ್ತೆಗೆ ಎಸಿಪಿ ಮಂಜುನಾಥ್​ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಆರೋಪಿ ಮಹಮ್ಮದ್ ನಲಪಾಡ್​​ನನ್ನು ತಕ್ಷಣ ಬಂಧಿಸುವಂತೆ ಪೊಲೀಸ್​ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಹ್ಯಾರಿಸ್​ ಪುತ್ರನ ಕೃತ್ಯ ಖಂಡನೀಯ

ಹ್ಯಾರಿಸ್​ ನನ್ನ ಸ್ನೇಹಿತ, ಆದರೆ ಅವರ ಮಗ ಮಹಮ್ಮದ್​ ನಲಪಾಡ್​ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇನೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಂಸದ ಪಿ.ಸಿ. ಮೋಹನ್​ ತಿಳಿಸಿದ್ದಾರೆ.

Comments are closed.