ಕರ್ನಾಟಕ

ಮಠಗಳ ನಿಯಂತ್ರಣ: ಸಿಎಂ ನಿರ್ಧಾರಕ್ಕೆ ಸ್ವಾಮೀಜಿ ಮೆಚ್ಚುಗೆ

Pinterest LinkedIn Tumblr

ಬೆಂಗಳೂರು: ಮಠ, ದೇವಸ್ಥಾನಗಳನ್ನು ನಿಯಂತ್ರಣ ಮಾಡುವ ಕೆಲಸಕ್ಕೆ ಸರಕಾರ ಕೈ ಹಾಕಬಾರದು‌. ಸರಕಾರ ಏನು ಮಾಡಬಹುದು ಎಂಬ ಗೊಂದಲ ಜನರಲ್ಲಿತ್ತು. ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲೇ ಉತ್ತರ ನೀಡಿ ಈ ಗೊಂದಲವನ್ನು ನಿವಾರಿಸಿದ್ದಾರೆ. ಇಂತಹ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ರಾಜಾಜಿನಗರದಲ್ಲಿ ಡಯಾಲಿಸಿಸ್ ಆಸ್ಪತ್ರೆಯ ಮಧುಮೇಹ ಕೇಂದ್ರವನ್ನು ಉದ್ಘಾಟಿಸಿದ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಧುಮೇಹ ಒಂದು ರೋಗವಲ್ಲ. ಆದರೆ ಅದು ಎಲ್ಲ ರೋಗಗಳಿಗೆ ತವರು ಮನೆ. ಅದೊಂದು ಕಾಯಿಲೆಯನ್ನು ನಿಯಂತ್ರಣ ದಲ್ಲಿ ಇಟ್ಟರೆ ಆರೋಗ್ಯ ಚೆನ್ನಾಗಿರುತ್ತದೆ‌. ಮನಸ್ಸನ್ನು ಆದಷ್ಟು ಶುದ್ಧವಾಗಿಟ್ಟುಕೊಂಡರೆ ಯಾವ ರೋಗವೂ ಬರುವುದಿಲ್ಲ ಎಂದರು.

Comments are closed.