ಕರ್ನಾಟಕ

ಫೆ 4ರಂದು ಬಂದ್‌ ಅಸಂವಿಧಾನಿಕ: ಹೈಕೋರ್ಟ್‌

Pinterest LinkedIn Tumblr


ಬೆಂಗಳೂರು: ಫೆಬ್ರವರಿ ನಾಲ್ಕರಂದು ಕನ್ನಡ ಪರ ಸಂಘಟನೆಗಳು ಕರೆದಿರುವ ಬಂದ್ ಅಸಂವಿಧಾನಿಕ ಹಾಗೂ ಅಕ್ರಮ. ಸುಪ್ರೀಂ ಕೋರ್ಟ್ ಬಂದ್ ಕಾನೂನು ಬಾಹಿರ ಎಂದು ಸಾರಿದೆ ಹಾಗಾಗಿ ಬಂದ್ ನಡೆಸುವಂತಿಲ್ಲ. ಸರಕಾರದ ಜನ ಸಾಮಾನ್ಯರ ಜೀವನಕ್ಕೆ, ವ್ಯಾಪಾರ ಮತ್ತು ಉದ್ದಿಮೆಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಬಂದ್‌ ನಿಷೇಧ ಕೋರಿ ರಾಜಾಜಿನಗರದ ಶ್ರದ್ದಾ ಪೋಷಕರ ಸಂಘ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆಯನ್ನು ಎರಡು ವಾರ ಮುಂದೂಡಿ ಕೋರ್ಟ್‌ ಈ ನಿರ್ದೇಶನ ನೀಡಿದೆ. ಯಾರೂ ಬೇಕಾದರೂ ಪ್ರತಿಭಟನೆ, ಹರತಾಳ ನಡೆಸಲಿ. ಆದರೆ ಬಂದ್ ಮಾಡುವ ಮೂಲಕ ಬೇರೆಯವರ ಮೂಲಭೂತ ಹಕ್ಕು ಕಸಿದುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಫೆ.ನಾಲ್ಕರಂದು ಬಂದ್‌ಗೆ ಕರೆ ನೀಡಿವೆ.

Comments are closed.