ಕರ್ನಾಟಕ

ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ… ಮುಖ್ಯಮಂತ್ರಿಗೆ ಪ್ರಶ್ನೆ ?

Pinterest LinkedIn Tumblr

ನವದೆಹಲಿ: ಹಿಂದೂ ಕಾರ್ಯಕರ್ತ ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಸಂಸದ ಪ್ರತಾಪ್ ಸಿಂಹ ಇದು 21ನೇ ಕೊಲೆಯಾಗಿದ್ದು ಇನ್ನು ಎಷ್ಟು ಕೊಲೆ ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಪ್ರಶ್ನಿಸಿರುವ, ಹಿಂದೂ ಕಾರ್ಯಕರ್ತ ದೀಪಕ್ ಅವರ ಕೊಲೆಯ ರಕ್ತಸಿಕ್ತ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಶೇರ್‌ ಮಾಡಿದ್ದಾರೆ.

ಜಿಹಾದಿಗಳ ಕ್ರೂರ ಮುಖವನ್ನು ಅರ್ಥ ಮಾಡಿಕೊಳ್ಳಲು ಈ ಫೋಟೋಗಳನ್ನು ನೋಡಲೇ ಬೇಕು. ಈಗ ನೀವು ಇದನ್ನ ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ಭವಿಷ್ಯ ಯೋಚಿಸಿ ಎಂದಿದ್ದಾರೆ.

ಪ್ರಕರಣವನ್ನು ಐಎನ್‍ಎ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಮನವಿ ಸಲ್ಲಿರುವ ಕುರಿತು ಟ್ವೀಟ್‍ ಮೂಲಕ ತಿಳಿಸಿದ್ದಾರೆ.

Comments are closed.