
ಮಂಡ್ಯ: ಮಹಿಳೆಯರನ್ನು ಯಾಮಾರಿಸಿ ಚಿನ್ನದ ಸರ ದೋಚುತ್ತಿದ್ದ ಖತರನಾಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜು (23), ಕಲ್ಯಾಣಿ( 28) ಹಾಗೂ ಭಾಗ್ಯ (25) ಬಂಧಿತರು. ಬಂಧಿತರಿಂದ ಅಂದಾಜು 15.50 ಲಕ್ಷ ರೂಪಾಯಿ ಮೌಲ್ಯದ 492 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮೋಟಾರ್ ಸೈಕಲ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಖತರನಾಕ್ ಕಳ್ಳರು ಜಾತ್ರೆ, ಸಂತೆಗಳಲ್ಲಿ ಹಣ, ಪರ್ಸ್ ಬೀಳಿಸಿ ಮಹಿಳೆಯರನ್ನು ಯಾಮಾರಿಸಿ ಚಿನ್ನದ ಸರ ದೋಚುತ್ತಿದ್ದರು. ಇವರ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಡಿಸೆಂಬರ್ 23ರಂದು ಆರತಿ ಉಕ್ಕಡದಲ್ಲಿ ಕಳ್ಳರ ಗ್ಯಾಂಗ್ನ್ನು ಬಂಧಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ಎಸ್ಪಿ ರಾಧಿಕಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Comments are closed.