ಕರ್ನಾಟಕ

ಯಡಿಯೂರಪ್ಪ ಕೈ ಮುಗಿತೀನಿ ನಿನಗೆ ಆ ಕೆಲಸ ಮಾಡಪ್ಪಾ! ಸಿಎಂ

Pinterest LinkedIn Tumblr


ಗದಗ:ಯಡಿಯೂರಪ್ಪ ಕೈ ಮುಗಿತೀನಿ ದಯವಿಟ್ಟು ಆ ಕೆಲಸ ಮಾಡು..ಇದು ತಿಂಗಳಲ್ಲಿ ಮಹದಾಯಿ ವಿವಾದ ಇತ್ಯರ್ಥ ಪಡಿಸುವುದಾಗಿ ನೀಡಿರುವ ಬಿಎಸ್ ವೈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ತಿರುಗೇಟು ನೀಡಿದ್ದಾರೆ.

ಸೋಮವಾರ ಗದಗ ಜಿಲ್ಲೆಯ ನರಗುಂದದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೈ ಮುಗಿತೀನಿ ದಯವಿಟ್ಟು ವಿವಾದ ಬಗೆಹರಿಸಿ ಎಂದರು.

ಮಹದಾಯಿ ವಿವಾದ ಇತ್ಯರ್ಥಕ್ಕಾಗಿ ಪ್ರಧಾನಿ ಮೋದಿ ಅವರ ಬಳಿ ಗೋಗರೆದೆ, ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಮೋದಿ ರೀತಿ ಯಾರೂ ವರ್ತಿಸಿರಲಿಲ್ಲ ಎಂದು ದೂರಿದರು.

ಯಡಿಯೂರಪ್ಪ ರಾಜ್ಯದ ರೈತರ ಪರ ಕೆಲಸ ಮಾಡಲಿ. ರೈತರ ಪರ ಕಾಳಜಿ ರಾಜಕೀಯವಾಗಿ ಬಳಸಿಕೊಳ್ಳುವುದು ತಪ್ಪು. 2018ರ ಆಗಸ್ಟ್ ಒಳಗೆ ಟ್ರಿಬ್ಯುನಲ್ ನಲ್ಲಿ ಅಂತಿಮ ನಿರ್ಧಾರ.ಮಹದಾಯಿ ಟ್ರಿಬ್ಯೂಲ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

-ಉದಯವಾಣಿ

Comments are closed.