ಕರ್ನಾಟಕ

ಬಿಗ್ ಬಾಸ್: ನಿವೇದಿತಾ ಕ್ಯಾಪ್ಟನ್ ಆಗಿದ್ದಕ್ಕೆ ಚಂದ್ರು ಕಾರಣವಂತೆ!

Pinterest LinkedIn Tumblr


ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ನಿವೇದಿತಾ ಕ್ಯಾಪ್ಟನ್ ಆಗಿ ನಾಯಕಿಯಾಗಿ ಆಯ್ಕೆಯಾಗಿದ್ದಕ್ಕೆ ಸಿಹಿ ಕಹಿ ಚಂದ್ರು ಕಾರಣವಂತೆ! ಬಿಗ್ ಬಾಸ್ ಮನೆಯೊಳಗೆ ಹೀಗೊಂದು ಚರ್ಚೆ ಭಾರೀ ಜೋರು ಚರ್ಚೆ ನಡೆಯಿತು.

ಟಾಸ್ಕ್ ಗೆ ಸಂಬಂಧ ಪಟ್ಟಂತೆ ಎಲ್ಲರೂ ವಿದ್ಯಾರ್ಥಿಗಳ ವೇಷ ತೊಟ್ಟು ಕೂತಿದ್ದರು. ಈ ವೇಳೆ ಸಿಹಿ ಕಹಿ ಚಂದ್ರು ನಿವೇದಿತಾ ಟಾಸ್ಕ್ ನಲ್ಲಿರುವಾಗಲೇ ನಾನು ನೀನು ಕ್ಯಾಪ್ಟನ್ ಆಗಬೇಕೆಂದು ನನಗೆ ಉತ್ತರ ಗೊತ್ತಿದ್ದರೂ ತಪ್ಪು ಹೇಳಿದ್ದೆ. ನಿನಗೆ ಆಸೆ ಇತ್ತಲ್ವಾ. ನೀನು ಕ್ಯಾಪ್ಟನ್ ಆಗಲಿ ಎಂದು ಬಿಟ್ಟುಕೊಟ್ಟೆ ಎಂದರು.

ಇದು ನಿವೇದಿತಾಗೆ ಇಷ್ಟವಾಗಲಿಲ್ಲ. ಟಾಸ್ಕ್ ಮುಗಿದ ಮೇಲೆ ರಿಯಾಜ್, ಚಂದನ್, ಜಯಶ್ರೀನಿವಾಸನ್ ಮುಂದೆ ಈ ವಿಷಯ ಪ್ರಸ್ತಾಪಿಸಿದ ನಿವೇದಿತಾ ನನ್ನ ಟ್ಯಾಲೆಂಟ್ ನಿಂದ ಗೆದ್ದೆ. ಆದರೆ ಚಂದ್ರು ಸರ್ ಹಾಗೆ ಹೇಳಿದ್ದು ನನಗೆ ನಿಜಕ್ಕೂ ಬೇಸರವಾಯಿತು ಎಂದು ಅಲವತ್ತುಗೈದರು ನಿವೇದಿತಾ.

Comments are closed.