ಕರ್ನಾಟಕ

ಬಿಜೆಪಿಗರು ಬ್ಲೂ ಫಿಲಂ ನೋಡಿ ಅಧಿಕಾರ ಕಳೆದುಕೊಂಡವರು..!

Pinterest LinkedIn Tumblr


ಬೆಂಗಳೂರು: ‘ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು ಅರುಳು ಮರಳು, ಹೀಗಾಗಿ ನನ್ನ ವಿರುದ್ಧ ಮನಸ್ಸಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ವಿಜಯನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನುಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.’ಬಿಜೆಪಿಗರು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುತ್ತಾರೆ. ಅವರು ಲಜ್ಜೆ ಗೆಟ್ಟವರು, ನಯವಂಚಕರು,ಭ್ರಷ್ಟರು.ಕೆಲವರು ಬ್ಲೂ ಫಿಲಂ ನೋಡಿ ಅಧಿಕಾರ ಕಳೆದುಕೊಂಡರು’ ಎಂದು ಕಿಡಿ ಕಾರಿದರು. ಇದೇ ವೇಳೆ ‘ಬ್ಲೂ ಫಿಲಂ ಅಂದ್ರೆ ಗೊತ್ತಾ, ನೀಲಿ ಚಿತ್ರ’ ಎಂದು ವಿವರ ನೀಡಿ ನೆರೆದವರನ್ನು ನಗೆ ಗಡಲಲ್ಲಿ ತೇಲಿಸಿದರು.

‘ಬಿಜೆಪಿಯವರು ಲೂಟಿ ಹೊಡದು ಮೊಸಳೆ ಕಣ್ಣೀರು ಸುರಿಸುತ್ತಾರೆ. ಯಡಿಯೂರಪ್ಪ, ಅಮಿತ್‌ ಶಾ ಜೈಲಿಗೆ ಹೋಗಿ ಬಂದದ್ದನ್ನು ಜನ ಮರೆತಿಲ್ಲ. ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ. ಜನತೆ ನೋಡಿದ್ದಾರೆ. ಮುಂದೆಯೂ ನಮಗೆ ಅಧಿಕಾರ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ವಿರುದ್ಧ ಆರೋಪ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಬಿಜೆಪಿ ನಾಯಕರು ತಾಕತ್ತಿದ್ದರೆ ಸಾಬೀತು ಮಾಡಲಿ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು.

‘ಬೆಂಗಳೂರು ನಗರಾಭಿವೃದ್ಧಿಗೆ 7000 ಕೋಟಿ ರೂ ನಾವು ನೀಡಿದ್ದೇವೆ. ಬಿಜೆಪಿಯವರು 3000 ಕೋಟಿ ರೂ ಬಿಲ್‌ ಬಾಕಿ ಉಳಿಸಿದ್ದರು. ನಾವು ಅದನ್ನೂ ತೀರಿಸಿದ್ದೇವೆ’ಎಂದರು.

‘ರಾಜ್ಯದಲ್ಲಿ ಶಾ ಮಂತ್ರದಂಡ ನಡೆಯುವುದಿಲ್ಲ,ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.

-ಉದಯವಾಣಿ

Comments are closed.