ಕರ್ನಾಟಕ

ದೇವನಹಳ್ಳಿ: ಕೆರೆಯಲ್ಲಿ ನೀರು ತರ ಹೋಗಿದ್ದ ಇಬ್ಬರು ಬಾಲಕಿಯರು ಸಾವು

Pinterest LinkedIn Tumblr


ದೇವನಹಳ್ಳಿ: ನೀರು ತರಲು ತೆರಳಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಐಬಸಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಬವಿಸಿದ್ದು ಗ್ರಾಮದ ನಿವಾಸಿಗಳಾದ ಮಾನಸಾ (12), ಲಕ್ಷ್ಮೀ (13) ಮೃತರು ಎಂದು ಗುರುತಿಸಲಾಗಿದೆ.

ಜೋಳದ ಬೆಳೆಗೆ ನೀರು ಹಾಕುವುದಕ್ಕಾಗಿ ಕೆರೆಗೆ ತೆರಳಿದ್ದ ಮಾನಸಾ, ಲಕ್ಷ್ಮೀ ಮತ್ತು ಶಶಾಂಕ್ ಕೆರೆಯಿಂದ ನೀರು ಎತ್ತಿಕೊಂಡು ಹೋಗುತ್ತಿದ್ದಾಗ ಕಾಲು ಜಾರಿದ ಕಾರಣ ಮೂವರೂ ನೀರಿಗೆ ಬಿದ್ದಿದ್ದರು. ಸ್ಥಳದಲ್ಲಿದ್ದ ರಾಜಣ್ಣ ಎನ್ನುವವರು ಬಾಲಕ ಶಶಾಂಕ್ ನನ್ನ ರಕ್ಷಣೆ ಮಾಡಿದ್ದಾರೆ. ಆದರೆ ಅಷ್ಟ್ರಲ್ಲಾಗಲೇ ನೀರಿನಲ್ಲಿ ಮುಳುಗಿದ್ದ ಮಾನಸಾ ಮತ್ತು ಲಕ್ಷ್ಮೀ ಮೃತಪಟ್ಟಿದ್ದಾರೆ.

ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments are closed.