ಕರ್ನಾಟಕ

ಪತಿ ವಿರುದ್ಧ ಪಾಲಿಕೆ ಸದಸ್ಯೆ ದೂರು

Pinterest LinkedIn Tumblr

ಬೆಂಗಳೂರು: ಮದ್ಯಪಾನ ಮಾಡಿ ಪತಿ ಕಿರುಕುಳ ನೀಡುತ್ತಿದ್ದು, ಠಾಣೆಗೆ ಕರೆದು ಬುದ್ಧಿವಾದ ಹೇಳುವಂತೆ ಬಿಬಿಎಂಪಿ ಥಣಿಸಂದ್ರ ವಾರ್ಡ್‌ ಕಾರ್ಪೊರೇಟರ್‌ ಕೆ.ಎಂ.ಮಮತಾ ಅವರು ಪತಿ ವೆಂಕಟೇಶ್‌ ವಿರುದ್ಧ ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.

ಮಮತಾ ನೀಡಿದ ದೂರಿನ ಅನ್ವಯ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೆ.ಎಂ.ಮಮತಾ ಅವರು ಥಣಿಸಂದ್ರ ವಾರ್ಡ್‌ ಸಂಖ್ಯೆ 6ರ ಸದಸ್ಯರಾಗಿದ್ದಾರೆ. ಮಮತಾ ಮತ್ತು ವೆಂಕಟೇಶ್‌ ಅವರಿಗೆ 14 ವರ್ಷಗಳ ಹಿಂದೆ ವಿವಾಹವಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕುಟುಂಬ ಕೊತ್ತನೂರು ಠಾಣಾ ವ್ಯಾಪ್ತಿಯ ಹೆಗ್ಡೆ ನಗರದಲ್ಲಿ ವಾಸವಿದ್ದಾರೆ.

ಅ.20ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದು ರಾತ್ರಿ ವೇಳೆ ಮಕ್ಕಳ ಮುಂದೆ ಥಳಿಸಿದ್ದಾರೆ. ಅವರನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಿ ನನಗೆ ರಕ್ಷಣೆ ನೀಡಿ ಎಂದು ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾರೆ.

ವೆಂಕಟೇಶ್‌ ಅವರು ವಿಚಾರಣೆಗೆ ಲಭ್ಯವಾಗಿಲ್ಲ. ಶೀಘ್ರದಲ್ಲೇ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Comments are closed.