ಬೆಂಗಳೂರು(ಜ.21); ಕನ್ನಡದ ಚಮ್ಕಾಯಿಸಿ ಚಿಂದಿ ಉಡಾಯಿಸಿದ ಪಂಚರಂಗಿ ಹುಡುಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿಯ ರಾಧೇ ನಿಧಿ ಸುಬ್ಬಯ್ಯ ಮದುವೆ ಆಗುತ್ತಿದ್ದಾರೆ. ಕೊಡಗಿನುಡುಗಿ ನಿಧಿ ಸುಬ್ಬಯ್ಯಾ ಮದುವೆ ಆಗುತ್ತಿರುವ ಹುಡುಗ ಮುಂಬೈ ಮೂಲದ ಬಿಜಿನೆಸ್ ಮೆನ್ ಲ್ಯಾವಿಷ್ ಕೈರಾಜಾನಿ. ದೂರದ ಸಂಬಂಧಿ.
ಜನವರಿ 2ನೇ ತಾರೀಖು ಲ್ಯಾವಿಷ್ ಲವ್ ಪ್ರಪೋಸ್ ಮಾಡಿದ್ದಾರೆ. ನಿಧಿಗೆ ಅಚ್ಚರಿಯನ್ನೂ ನೀಡಿದ್ದಾರೆ. ರೆಸಾರ್ಟ್ ಒಂದನ್ನ ಬುಕ್ ಮಾಡಿ. ಸುಂದರ ಹೂಗಳಿಂದ ಅಲಂಕರಿಸಿದ ಬ್ಯಾಗ್ರೌಂಡ್`ನಲ್ಲಿ ಸ್ಪೆಷಲ್ ಡಿಸೈನರ್ ಟೇಬಲ್ ಮುಂದೆ ನಿಂತ ಲ್ಯಾವಿಷ್ ಒಂದು ಗಂಟೆ ಕಾಲ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರಂತೆ. ನಿಧಿ ಫುಲ್ ಫಿದಾ ಆಗಿ ಹೋದರಂತೆ. ಡೈಮಂಡ್ ರಿಂಗ್ ತೆಗೆದು ಬೆರಳಿಗೂ ತೊಡಿಸಿಬಿಟ್ಟರಂತೆ. ಮದುವೆ ಏನಿದ್ರೂ ಕೂರ್ಗ್`ನಲ್ಲಿ ನಡೆಯಲಿದೆಯಂತೆ. ಯಾವುದಕ್ಕೂ ಇನ್ನಷ್ಟು ಮಾಹಿತಿಗಾಗಿ ಕಾದು ನೋಡಿ.
ಕರ್ನಾಟಕ
Comments are closed.