ಕಲಬುರಗಿ (ಜ.21): ಇವತ್ತಿನ ಬಿಜೆಪಿ ಕಾರ್ಯಕಾರಿಣಿ ಸಂಬಂಧ ಹಾಕಲಾದ ಫ್ಲೆಕ್ಸ್ ಹಾಗೂ ಬ್ಯಾನರ್’ಗಳಲ್ಲಿ ಈಶ್ವರಪ್ಪ ಫೋಟೋ ಕಾಣದಾಗಿತ್ತು.
ಆಯೋಜಕರು ಉದ್ದೇಶಪೂರ್ವಕವಾಗಿ ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ ಫೋಟೋ ಮರೆ ಮಾಚಿದ್ದಾರೆ ಎಂಬ ಗುಸುಗುಸು ಕೇಳಿ ಬಂತು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಜ್ಞೆಯಂತೆ ಇದು ನಡೆಯಿತಾ? ಅಥವಾ ನಿಜಕ್ಕೂ ಅಚಾತುರ್ಯನಾ? ರಾಯಣ್ಣ ಬ್ರಿಗೇಡ್ ವಿಚಾರವಾಗಿ ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವಿನ ಮನಸ್ತಾಪ ವಿಕೋಪ ತಲುಪಿರುವಾಗ ಈ ಬೆಳವಣಿಗೆ ಭಾರೀ ಚರ್ಚೆಗೆ ಒಳಗಾಗಿತ್ತು. ಕೊನೆಗೂ ಯಡಿಯೂರಪ್ಪ, ಈಶ್ವರಪ್ಪ ನಾನೊಂದು ತೀರ ನೀನೊಂದು ತೀರವಾಗಿದ್ದು ಕಂಡು ಬಂತು.
ಕರ್ನಾಟಕ
Comments are closed.