ಕರ್ನಾಟಕ

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ: ಶೋಭಾಗೆ ನೋಟಿಸ್

Pinterest LinkedIn Tumblr


ಬೆಂಗಳುರು (ಜ.16): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ ವಿರುದ್ಧ ಸಚಿವ ರೋಷನ್ ಬೇಗ್ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ನ್ಯಾಯಾಲಯವು ನೋಟಿಸ್ ಜಾರಿಮಾಡಿದೆ.
ಕಳೆದ ಅಕ್ಟೋಬರ್’ನಲ್ಲಿ ಬೆಂಗಳೂರಿನ ಶಿವಾಜಿನಗರ ಬಳಿ ನಡೆದ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಕೈವಾಡವಿದೆಯೆಂದು ಕರಾಂದ್ಲಾಜೆ ಆರೋಪಿಸಿದ್ದರು.
ರೋಷನ್ ಬೇಗ್, ಕರಂದ್ಲಾಜೆ ವಿರುದ್ಧ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ಈಗ ಕರಾಂದ್ಲಾಜೆಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ಅಕ್ಟೋಬರ್’ನಲ್ಲಿ ತಾಲೀಮು ಮುಗಿಸಿ ಮನೆಗೆ ವಾಪಸು ಬರುತ್ತಿದ್ದ ವೇಳೆ ದುಷ್ಕರ್ಮಿಗಳು ರುದ್ರೇಶ್’ರನ್ನು ಹತ್ಯೆಗೈದಿದ್ದರು

Comments are closed.