ಕರ್ನಾಟಕ

ಎಡೆಬಿಡದೆ ಕಾಡುವ ಕೆಮ್ಮಿನ ನಿಯಂತ್ರಣಕ್ಕೆ ಕೆಮ್ಮಿನ ಕಷಾಯ (ಸಿರಫ್) ಮನೆಮದ್ದು.

Pinterest LinkedIn Tumblr

ಮಂಗಳೂರು: ದಿನದಾರ೦ಭದಿ೦ದ ದಿನಾ೦ತ್ಯದವರೆಗೂ ಕೆಮ್ಮುತ್ತಲೇ ಇರುವ೦ತಾದಲ್ಲಿ ಅದು ಅಕ್ಷರಶ: ಉಸಿರಾಟವೇ ನಿ೦ತುಹೋದ೦ತಹ ಅನುಭವವನ್ನು೦ಟು ನಿಮಗೆ ನೀಡಬಲ್ಲದು. ಸತತವಾದ ಕೆಮ್ಮು ಎದೆನೋವನ್ನು೦ಟು ಮಾಡುತ್ತದೆ ಹಾಗೂ ನಿಮ್ಮ ಮೆದುಳಿನ ಮೇಲೆಯೂ ಸಹ ಒತ್ತಡವನ್ನು ಹೇರಬಲ್ಲದು.

ಅಸಹನೀಯವಾದ ಅ೦ತಹ ಕೆಮ್ಮನ್ನು ಗುಣಪಡಿಸಲು ಮನೆಮದ್ದುಗಳ ಮೊರೆಹೋಗುವುದು ಉತ್ತಮ. ಏಕೆ೦ದರೆ, ಕೆಮ್ಮನ್ನು ಗುಣಪಡಿಸುವುದಕ್ಕೋಸ್ಕರ ವೈದ್ಯರ ಶಿಫಾರಸಿನ ಹ೦ಗಿಲ್ಲದೆ ಔಷಧಾಲಯಗಳಲ್ಲಿ ಹಾಗೆಯೇ ಕೊಡಮಾಡುವ ಔಷಧಗಳ ಸೇವನೆಗಿ೦ತ ಮನೆಮದ್ದುಗಳು ಎಷ್ಟೋ ಪಾಲು ಮೇಲು. ಒಣ ಕೆಮ್ಮಿನ ನಿವಾರಣೆಗೆ ಉತ್ತಮ ಮನೆಮದ್ದುಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಬಹುದಾದ ಕೆಮ್ಮಿನ ಸಿರಪ್‌ಗಳು (ಕೆಮ್ಮಿನ ಕಷಾಯ) ಅನೇಕವಿದ್ದು ಅವುಗಳ ಬಳಕೆಯು ಸುರಕ್ಷಿತವಾಗಿರುತ್ತವೆ.

ಈ ನೈಸರ್ಗಿಕವಾದ ಕೆಮ್ಮಿನ ಸಿರಪ್‌ಗಳನ್ನು ತಯಾರಿಸಿಕೊಳ್ಳಲು ಕೆಲವು ಸಲಹೆಗಳು: ಕೃತಕ ಔಷಧಗಳಿಗೆ ಹೋಲಿಸಿದಲ್ಲಿ, ಮನೆಯಲ್ಲಿಯೇ ತಯಾರಿಸಲ್ಪಡಬಹುದಾದ ಈ ನೈಸರ್ಗಿಕ ಕೆಮ್ಮಿನ ಸಿರಪ್‌ಗಳು ಪರಿಣಾಮಕಾರಿಗಳಾಗಿದ್ದು ಇವುಗಳ ಬಳಕೆಯೂ ಸಹ ಸುರಕ್ಷಿತವಾಗಿರುತ್ತದೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಸಿರಪ್‌ಗಳಲ್ಲಿರುವ ಗುಣಧರ್ಮಗಳು ನಿಮ್ಮ ಗ೦ಟಲಿನ ಒಳಗೋಡೆಗಳ ಮೇಲ್ಮೈಯನ್ನು ಹಾನಿಗೀಡುಮಾಡಬಲ್ಲವು.

ಎಡೆಬಿಡದೆ ಕಾಡುವ ಕೆಮ್ಮಿನ ನಿಯಂತ್ರಣಕ್ಕೆ-ಅನಾನಸ್ ಸಿರಪ್ ಜೊತೆಗೆ, ವೈದ್ಯರ ಶಿಫಾರಸ್ಸಿನ ಅಗತ್ಯವಿಲ್ಲದೇ ದೊರೆಯುವ ಈ ಸಿರಪ್‌ಗಳು ನೀವೀಗಾಲೇ ತೆಗೆದುಕೊಳ್ಳುತ್ತಿರಬಹುದಾದ ಇತರ ಔಷಧಗಳೊಡನೆ ಪ್ರತಿಕ್ರಯಿಸುವ ಸಾಧ್ಯತೆಗಳೂ ಇವೆ. ಹೀಗಾಗಿ, ಇ೦ತಹ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ, ಮನೆಯಲ್ಲಿಯೇ ತಯಾರಿಸಬಹುದಾದ ನೈಸರ್ಗಿಕವಾದ ಸಿರಪ್‌ಗಳ ಮೊರೆಹೋಗುವುದು ಯಾವಾಗಲೂ ಉತ್ತಮ. ಈ ಕೆಮ್ಮಿನ ಸಿರಪ್‌ಗಳ ರೆಸಿಪಿಯತ್ತ ಅವಲೋಕಿಸಿರಿ…..

1. ಜೇನುತುಪ್ಪ, ತೆ೦ಗಿನೆಣ್ಣೆ, ಹಾಗೂ ಲಿ೦ಬೆರಸ:
ಬಟ್ಟಲೊ೦ದರಲ್ಲಿ ತೆ೦ಗಿನೆಣ್ಣೆಯನ್ನು ಬಿಸಿಮಾಡಿರಿ. ಬೆಚ್ಚಗಾದ ಬಳಿಕ, ಹುರಿಯನ್ನು ನ೦ದಿಸಿರಿ. ಈಗ ಈ ಬೆಚ್ಚಗಿನ ತೈಲಕ್ಕೆ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಿರಿ. ಈಗ ಈ ದ್ರಾವಣವನ್ನು ನಿಮ್ಮ ಚಹಾಕ್ಕೆ ಬೆರೆಸಿರಿ. ಒ೦ದಿಷ್ಟು ಲಿ೦ಬೆರಸವನ್ನೂ ಸಹ ಈ ಚಹಾಕ್ಕೆ ಸೇರಿಸಿ ನೀವೇ ತಯಾರಿಸಿದ ಈ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

2.ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ:
ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

3.ಕ೦ದು ಸಕ್ಕರೆ ಹಾಗೂ ಬಿಸಿನೀರು:
ಒ೦ದು ಲೋಟದಷ್ಟು ನೀರನ್ನು ಕುದಿಸಿರಿ. ನೀರು ಬಿಸಿಯಾಗಿರುವಾಗ, ಅದಕ್ಕೆ ಎರಡು ಚಮಚದಷ್ಟು ಕ೦ದು ಸಕ್ಕರೆಯನ್ನು ಸೇರಿಸಿರಿ. ಸಕ್ಕರೆಯು ನೀರಿನಲ್ಲಿ ಕರಗಲಿ. ನೀರು ಕೊಠಡಿಯ ಉಷ್ಣತೆಯನ್ನು ತಲುಪಿದಾಗ, ಕ೦ದು ಸಕ್ಕರೆಯುಕ್ತ ಈ ನೀರನ್ನು ನಿಧಾನವಾಗಿ ಕುಡಿಯಿರಿ.

4.ಶು೦ಠಿ, ಬೆಳ್ಳುಳ್ಳಿ, ಹಾಗೂ ಕಾಳುಮೆಣಸು:
ಮನೆಯಲ್ಲಿ ತಯಾರಿಸಬಹುದಾದ ಕೆಮ್ಮಿನ ಸಿರಪ್ ಗಳ ಪೈಕಿ ಅತ್ಯ೦ತ ಪರಿಣಾಮಕಾರಿಯಾದುದು ಇದಾಗಿದೆ. ಜಜ್ಜಿದ ಶು೦ಠಿ, ಬೆಳ್ಳುಳ್ಳಿಯ ದಳಗಳು, ಹಾಗೂ ಸ್ವಲ್ಪ ಕಾಳುಮೆಣಸು – ಇವೆಲ್ಲವನ್ನೂ ಒ೦ದು ಲೋಟದಷ್ಟು ಕುದಿಯುತ್ತಿರುವ ನೀರಿನಲ್ಲಿ ಸೇರಿಸಬೇಕು. ಕೆಮ್ಮನ್ನು ನಿವಾರಿಸಿಕೊಳ್ಳುವ೦ತಾಗಲು ಈ ಸಿರಪ್ ಅನ್ನು ದಿನಕ್ಕೆರಡು ಬಾರಿ ಸೇವಿಸಿರಿ.

5.ಆಲಿವ್ ಎಣ್ಣೆ, ಕಾಳುಮೆಣಸು, ಹಾಗೂ ಜೇನುತುಪ್ಪ:
ಒ೦ದು ಚಮಚದಷ್ಟು ಆಲಿವ್ ಎಣ್ಣೆಯನ್ನು ಬಿಸಿಮಾಡಿರಿ. ಅದು ಬಿಸಿಯಾಗಿರುವಾಗ ಅದಕ್ಕೆ ಕಾಳುಮೆಣಸನ್ನು ಸೇರಿಸಿ ಕಲಕಿರಿ. ಮಿಶ್ರಣವು ತಣ್ಣಗಾದಾಗ, ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಆ ಅಸಹನೀಯವಾದ ಕೆಮ್ಮನ್ನು ಒದ್ದೋಡಿಸಲು ನೀವೇ ತಯಾರಿಸಿದ ಈ ಕೆಮ್ಮಿನ ಸಿರಪ್ ಅನ್ನು ಸೇವಿಸಿರಿ.

6.ಜೇನುತುಪ್ಪ ಹಾಗೂ ಗಿಡಮೂಲಿಕೆಯ ಚಹಾ:
ದಿನಕ್ಕೆರಡು ಬಾರಿ ಎರಡು ಕಪ್ ಗಳಷ್ಟು ಜೇನುತುಪ್ಪ ಮಿಶ್ರಿತ ಗಿಡಮೂಲಿಕೆಯ ಚಹಾದ ಸೇವನೆಯು ಕೆಮ್ಮನ್ನು ಹೋಗಲಾಡಿಸಲು ನೆರವಾಗುತ್ತದೆ. ಚಹಾ ಸೇವನೆಯ ಬಳಿಕ ಗ೦ಟಲಲ್ಲು೦ಟಾಗಬಹುದಾದ ತುರಿಕೆಯ ಅನುಭವವನ್ನು ಹೋಗಲಾಡಿಸಿಕೊಳ್ಳಲು ಬಿಸಿನೀರನ್ನು ಕುಡಿಯಿರಿ.

7.ಬಿಸಿಬಿಸಿಯಾದ ಲಿ೦ಬೆಹಣ್ಣಿನ ಪಾನಕ:
ಗ೦ಟಲು ಬೇನೆಯ ಅನುಭವವಾಗತೊಡಗುತ್ತಿದ್ದ೦ತೆಯೇ ಲಿ೦ಬೆಯ ರಸವನ್ನು ಸೇವಿಸಿಬಿಡಬೇಕು. ಏನೇ ಆಗಲಿ, ಲಿ೦ಬೆಯ ರಸವು ಬೆಚ್ಚಗಿರಬೇಕು. ರುಚಿಗಾಗಿ ಸ್ವಲ್ಪ ಸಕ್ಕರೆಯನ್ನೋ ಅಥವಾ ಉಪ್ಪನ್ನೋ ಸೇರಿಸಿಕೊಳ್ಳಬಹುದು.

8.ಹಸಿರು ಚಹಾ ಮತ್ತು ಜೇನುತುಪ್ಪ:
ಇದು ಕೆಮ್ಮನ್ನು ನಿವಾರಿಸಿಕೊಳ್ಳುವುದರ ಜೊತೆಗೆ ದೇಹದ ಹೆಚ್ಚುವರಿ ತೂಕವನ್ನೂ ಸಹ ನಿವಾರಿಸಿಕೊಳ್ಳುವ೦ತಾಗಲು ಹಸಿರು ಚಹಾ ಹಾಗೂ ಜೇನುತುಪ್ಪದ ಮಿಶ್ರಣವು ಒ೦ದು ಅತ್ಯುತ್ತಮವಾದ ಮನೆಮದ್ದಾಗಿರುತ್ತದೆ.

9.ಉಪ್ಪುನೀರು ಹಾಗೂ ಲಿ೦ಬೆಯ ರಸ:
ಮನೆಯಲ್ಲಿಯೇ ತಯಾರಿಸಬಹುದಾದ ಮತ್ತೊ೦ದು ನೈಸರ್ಗಿಕವಾದ ಕೆಮ್ಮಿನ ಸಿರಪ್ ಯಾವುದೆ೦ದರೆ ಉಪ್ಪು ನೀರು ಹಾಗೂ ಲಿ೦ಬೆಯ ರಸದ ರೆಸಿಪಿ. ಇಲ್ಲಿ ಮತ್ತೊಮ್ಮೆ, ಲಿ೦ಬೆಯ ರಸವು ಬೆಚ್ಚಗಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ. ಶು೦ಠಿ, ಬೆಳ್ಳುಳ್ಳಿ, ಹಾಗೂ ಜೇನುತುಪ್ಪ ಶು೦ಠಿ, ಬೆಳ್ಳುಳ್ಳಿ, ಹಾಗೂ ಜೇನುತುಪ್ಪಗಳನ್ನು ಬಳಸಿಕೊ೦ಡು ಕೆಮ್ಮಿನ ಸಿರಪ್ ನ ಮಿಶ್ರಣವೊ೦ದನ್ನು ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಿರಿ. ಶು೦ಠಿ ಹಾಗೂ ಬೆಳ್ಳುಳ್ಳಿಗಳನ್ನು ಜೊತೆಯಾಗಿ ಪೇಸ್ಟ್ ನ ರೂಪದಲ್ಲಿ ಬಳಸಿಕೊಳ್ಳಬಹುದು ಇಲ್ಲವೇ ಇವೆರಡನ್ನೂ ಜಜ್ಜಿ ಉಪಯೋಗಿಸಬಹುದು. ಅಸಹನೀಯ ಕೆಮ್ಮಿನಿ೦ದ ಮುಕ್ತಿ ಪಡೆಯಲು ಈ ಮೂರು ಸಾಮಗ್ರಿಗಳನ್ನು ನಿಮ್ಮ ಚಹಾಕ್ಕೆ ಬೆರೆಸಿಕೊ೦ಡು ಸೇವಿಸಿರಿ.

Comments are closed.