ಕರ್ನಾಟಕ

ದಂಪತಿ ತಂಗಿದ್ದ ಗೋಡೆಗೆ ರಂಧ್ರ ಕೊರೆದಿದ್ದ ಕಡೂರಿನ ಲಾಡ್ಜ್ ಪರಿಶೀಲಿಸಿದ ಪೊಲೀಸರು

Pinterest LinkedIn Tumblr

ckm-lodge-1
ಚಿಕ್ಕಮಗಳೂರು: ನಾವು ರೂಂ ಬಾಡಿಗೆ ಪಡೆದಾಗ ಗೋಡೆಗೆ ರಂಧ್ರ ಕೊರೆದು ಫೋಟೋ ಹೊಡೆದಿದ್ರು ಎಂದು ಬಾಗಲಕೋಟೆ ಮೂಲದ ದಂಪತಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕಡೂರು ಪೊಲೀಸರು ಶನಿವಾರ ಲಾಡ್ಜ್ ಗೆ ತೆರಳಿ ಪರಿಶೀಲನೆ ನಡೆಸಿದರು. ಕಡೂರು ಪಿಎಸ್‍ಐ ರಾಕೇಶ್ ಮತ್ತು ಸಿಬ್ಬಂದಿ ಲಾಡ್ಜ್ ನಲ್ಲಿರುವ ರೂಮ್‍ಗಳ ಪೈಕಿ ಪ್ರಕರಣ ನಡೆದ ಕೋಣೆಯಲ್ಲಿರುವ ರಂಧ್ರಗಳು ಮತ್ತಿತರ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿ ಲಾಡ್ಜ್ ನಲ್ಲಿರುವ ಸಿ.ಸಿ.ಟಿವಿ ಹಾರ್ಡ್ ಡಿಸ್ಕ್, ಸಿಬ್ಬಂದಿ ಹಾಜರಿ ಪುಸ್ತಕ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ?: ಚಿಕ್ಕಮಗಳೂರು ಜಿಲ್ಲೆ ಕಡೂರಿನ ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್ ಮುಂಭಾಗ ಇರೋ ನಂಜುಂಡೇಶ್ವರ ಲಾಡ್ಜ್ ನಲ್ಲಿ ಕಳೆದ ಡಿಸೆಂಬರ್ 19ರಂದು ಬಾಗಲಕೋಟೆ ಮೂಲದ ದಂಪತಿ ತಂಗಿದ್ದರು. ಧರ್ಮಸ್ಥಳಕ್ಕೆ ಹೊರಟಿದ್ದ ಇವರು ತಡರಾತ್ರಿಯಾಗಿದ್ರಿಂದ ಈ ಲಾಡ್ಜ್ ನಲ್ಲಿ ಉಳಿದುಕೊಂಡಿದ್ರು. ಮಧ್ಯ ರಾತ್ರಿ 1.30ರ ಸುಮಾರಿಗೆ ಮೂರು ಬಾರಿ ಲಾಡ್ಜ್ ಗೋಡೆಯಲ್ಲಿ ಫ್ಲ್ಯಾಶ್ ಕಾಣಿಸಿದೆ. ಕೂಡಲೇ ಅವ್ರು ಎದ್ದು ನೋಡಿದ್ರೆ ಏನೂ ಗೊತ್ತಾಗಿಲ್ಲ.

ಬೆಳಗ್ಗೆ ಎದ್ದು ಪಕ್ಕದ ರೂಂ ಕೀ ಕೇಳಿದಾಗ ಮಾಲೀಕರೊಂದಿಗೆ ಜಗಳವಾಗಿದೆ. ಕೂಡಲೇ ಅವ್ರು ಅವರ ಸಂಬಂಧಿಗೆ ಫೋನ್ ಮಾಡಿದ್ದಾರೆ. ಅವರು ಬಂದು ಗಲಾಟೆ ಮಾಡುತ್ತಿದ್ದಂತೆ ರೂಂ ಕೀ ಕೊಟ್ಟೋರು ನಾಪತ್ತೆಯಾಗಿದ್ದಾರೆ. ರೂಂ ಒಳ ಹೋಗ ನೋಡಿದರೆ ಮಾಲೀಕರ ರೂಮಲ್ಲಿ ಕಾಂಡೋಮ್ ಪ್ಯಾಕೇಟ್‍ಗಳು ಸಾಕಷ್ಟಿದ್ವು. ಇದನ್ನೆಲ್ಲಾ ಗಮನಿಸಿದ್ರೆ ಇವ್ರು ಆ ಕೋಣೆಯಿಂದ ಕೊರೆದ ರಂಧ್ರದ ಮೂಲಕ ವೀಡಿಯೋ ಮಾಡುತ್ತಿದ್ದರಾ ಎಂಬ ಅನುಮಾನ ಶುರುವಾಗಿದೆ. ಇದನ್ನು ತಿಳಿದ ದಂಪತಿ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Comments are closed.