ಕರ್ನಾಟಕ

ಕೊಲ್ಲೂರಿನಿಂದ ಶಬರಿಮಲೆಗೆ ಹೊರಟ ಅಯ್ಯಪ್ಪ ಭಕ್ತನಿಗೆ 600 ಕಿ.ಮೀ. ವರೆಗೆ ಅನಿರೀಕ್ಷಿತವಾಗಿ ಸಾಥ್ ನೀಡಿದ ಬೀದಿ ನಾಯಿ !

Pinterest LinkedIn Tumblr

naveen_malu_sabarimala

ಕೇರಳ ಮೂಲದ ವ್ಯಕ್ತಿಯೊಬ್ಬರು ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದ ವೇಳೆ 600 ಕಿ.ಮೀ. ವರೆಗೆ ಬೀದಿ ನಾಯಿಯೊಂದು ಅವರಿಗೆ ಸಾತ್ ನೀಡುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

ನವೀನ್ ಮೊದಲ ಬಾರಿಗೆ 700 ಕಿಲೋಮೀಟರ್ ಪಾದಯಾತ್ರೆಯ ಎರಡನೇ ದಿನ ಅಂದರೆ ಡಿಸೆಂಬರ್ 8ರಂದು ಮಾಲುವನ್ನು ನೋಡಿದರು. ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆಗೆ ಯಾತ್ರೆ ಹೊರಟಿರುವ ನವೀನ್, ತನ್ನ ಜೀವಮಾನದ ಸ್ನೇಹಿತನ ಬಗ್ಗೆ ಹೆಮ್ಮೆಪಟ್ಟರು. ಯಾತ್ರೆಯಲ್ಲಿ ಅವರಿಗೆ ನಿರಂತರವಾಗಿ ಮಾಲು ಸಾಥ್ ನೀಡುತ್ತಿದ್ದಾನೆ.

naveen_malu_edited-compressed

ಮಾಲು ನವೀನ್‌ನ ಸಾಕುನಾಯಿಯಲ್ಲ. ಕೇವಲ ಬೀದಿನಾಯಿ. ಈ ಗಡ್ಡಧಾರಿಯ ಪಾದಯಾತ್ರೆ ಬಗ್ಗೆ ಕುತೂಹಲದಿಂದ ಇಡೀ ಯಾತ್ರೆಯುದ್ದಕ್ಕೂ ಹಿಂಬಾಲಿಸುತ್ತಾ ಬಂದಿದೆ. ಕೇರಳದ ಕೋಯಿಕೋಡ್ ಮೂಲದ ನವೀನ್ (38), 600 ಕಿಲೋಮೀಟರ್ ಪಾದಯಾತ್ರೆಯಲ್ಲಿ ಈಗಾಗಲೇ 17 ದಿನ ಕಳೆದಿದ್ದಾರೆ. ಡಿಸೆಂಬರ್ 23ರಂದು ಪಾದಯಾತ್ರೆಯಿಂದ ಮರಳುವಾಗ ಕೂಡಾ ಈ ಶ್ವಾನ ಹಿಂಬಾಲಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೂಡಾ ಅವರ ಪಕ್ಕದಲ್ಲೇ ಕುಳಿತುಕೊಂಡಿತ್ತು.

21

ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಉದ್ಯೋಗಿಯಾಗಿರುವ ನವೀನ್, ತಮ್ಮ ಯಾತ್ರೆಯನ್ನು ಡಿಸೆಂಬರ್ 7ರಂದು ಆರಂಭಿಸಿದರು. ಹಲವು ಬೀದಿ ನಾಯಿಗಳಂತೆ ಇದರ ಬಗ್ಗೆ ಮೊದಲಿಗೆ ನವೀನ್ ಭಯಪಟ್ಟರು. ಆದರೆ ಇದು ಇತರ ನಾಯಿಗಳಿಗಿಂತ ಭಿನ್ನ ಎನ್ನುವುದು ಒಂದೇ ದಿನದಲ್ಲಿ ತಿಳಿಯಿತು.

“ಸುಮಾರು 80 ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಮೊದಲು ನಾನು ಗಮನಿಸಿದೆ. ನನ್ನ ಎದುರಿನಿಂದಲೇ ಅದು ಬಂದು ನನ್ನನ್ನು ತಡೆಯಿತು. ಅದನ್ನು ಓಡಿಸಲು ಹಲವು ಬಾರಿ ಪ್ರಯತ್ನಿಸಿದರೂ, ಅದು ಹೋಗಲೇ ಇಲ್ಲ” ಎಂದು ನವೀನ್ ವಿವರಿಸಿದರು. ಸುಮಾರು 20 ಮೀಟರ್ ಅಂತರದಲ್ಲಿ ಸಾಥ್ ನೀಡುತ್ತಿದೆ.

Comments are closed.