ಕರ್ನಾಟಕ

ಪತಿ ಮೈಮೇಲೆ ಕಾದ ಎಣ್ಣೆ ಸುರಿದ ಪತ್ನಿ

Pinterest LinkedIn Tumblr

hbl-3-1ಧಾರವಾಡ: ಅಪ್ರಾಪ್ತ ಮಗಳ ಮದುವೆ ಮಾಡುವುದು ಬೇಡ ಎಂದಿದಕ್ಕೆ ಮಹಿಳೆ ತನ್ನ ಪತಿಯ ಕಣ್ಣಿಗೆ ಖಾರದ ಪುಡಿ ಹಾಕಿ, ಅಡುಗೆ ಎಣ್ಣೆ ಸುರಿದಿರುವ ಘಟನೆ ಧಾರವಾಡ ತಾಲೂಕು ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಶೇಖಪ್ಪ ಹಾಗೂ ಪತ್ನಿ ನೀಲವ್ವ ಮಗಳ ಮದುವೆ ವಿಚಾರವಾಗಿ ಬುಧವಾರ ಮುಂಜಾನೆ ಜಗಳ ಮಾಡಿಕೊಂಡಿದ್ದಾರೆ. ಕೇವಲ 13 ವರ್ಷದ ಮಗಳ ಮದುವೆ ಮಾಡಲು ಪತ್ನಿ ನೀಲವ್ವ ನಿರ್ಧರಿಸಿದ್ದಾಳೆ. ಆದ್ರೆ ಇದಕ್ಕೆ ಪತಿ ಶೇಖಪ್ಪಾ ಇಷ್ಟು ಬೇಗ ಮದುವೆ ಮಾಡುವುದು ಬೇಡ ಎಂದು ಮದುವೆಗೆ ನಿರಾಕರಿಸಿದ್ದಾರೆ. ಇದ್ರಿಂದ ಕೋಪಗೊಂಡ ನೀಲವ್ವ, ಪತಿಯ ಜೊತೆ ಜಗಳಕ್ಕೆ ಇಳಿದಿದ್ದಾಳೆ. ಜಗಳ ವಿಕೋಪಕ್ಕೆ ತಿರುಗಿದ್ದು, ನೀಲವ್ವ ಕೈಗೆ ಸಿಕ್ಕ ಖಾರದ ಪುಡಿಯನ್ನ ಪತಿಯ ಕಣ್ಣಿಗೆ ಎರಚಿದ್ದಾಳೆ. ಬಳಿಕ ಒಲೆಯ ಮೇಲಿದ್ದ ಕಾದ ಎಣ್ಣೆಯನ್ನು ಪತಿ ಶೇಖಪ್ಪನ ಮೈಮೇಲೆ ಸುರಿದಿದ್ದಾಳೆ.

ಘಟನೆಯಿಂದ ಶೇಖಪ್ಪನ ಮುಖ ಹಾಗೂ ಕೈ ಕಾಲು ಭಾಗಶಃ ಸುಟ್ಟಿದ್ದು, ಸದ್ಯ ಹುಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗಳ ಮದುವೆ ವಿಚಾರದಲ್ಲಿ ಹಲವು ಬಾರಿ ಗಂಡ ಹೆಂಡ್ತಿ ಪರಸ್ಪರ ಜಗಳ ಮಾಡಿಕೊಂಡಿದ್ದು, ಈ ಬಾರಿ ಜಗಳ ವಿಕೋಪಕ್ಕೆ ತಿರುಗಿದೆ. ಪತಿ ಮೇಲೆ ಹಲ್ಲೆ ನಡೆಸಿದ ನೀಲವ್ವ ಪರಾರಿಯಾಗಿದ್ದು, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.