ಬೆಂಗಳೂರು(ಅ.31): ಒಕ್ಕಲಿಗ ಮುಖಂಡರು ಶಾಸಕ ಮುನಿರತ್ನ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಈ ಪ್ರತಿಭಟನೆ ಬೇಡ ಎಂದು ಆರ್.ಅಶೋಕ್ ತಡೆ ಹಾಕಿದ್ದಾರೆ.
ಬಿಜೆಪಿ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರಗೆ ಇಂದು ಅಶೋಕ್ ಕರೆ ಮಾಡಿ ಪ್ರತಿಭಟನೆ ಬೇಡ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಇದು ಸುಳ್ಳು, ಆರ್.ಅಶೋಕ್ ತಮಗೆ ಕರೆ ಮಾಡಿಲ್ಲ ಎಂದು ಮಾಜಿ ಕಾರ್ಪೊರೇಟರ್ ರಾಮಚಂದ್ರ ಹೇಳಿಕೆ ನೀಡಿದ್ದಾರೆ. ‘ಇದು ಸಮುದಾಯದ ನಿರ್ಧಾರ. ಹಾಗಾಗಿ ಪ್ರತಿಭಟನೆ ಬಗ್ಗೆ ಮತ್ತೊಮ್ಮೆ ಸ್ವಾಮೀಜಿಗಳ ಜೊತೆ ಚರ್ಚಿಸುತ್ತೇವೆ’ ಎಂದಿದ್ದಾರೆ.
ಇತ್ತೀಚಿನ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ನಿರ್ಮಲಾನಂದ ಸ್ವಾಮಿಗಳ ಸಮ್ಮುಖದಲ್ಲಿ ‘ಶ್ರೀಗಳೇ ರಾಜ್ಯ ಆಳಲಿ’ ಎಂದಿದ್ದರು. ಈ ಹೇಳಿಕೆಯನ್ನು ಒಕ್ಕಲಿಗ ಮುಖಂಡರು ವಿರೋಧಿಸಿದಲ್ಲದೆ, ನಿನ್ನೆ ಸಭೆ ನಡೆಸಿದ ಒಕ್ಕಲಿಗ ಮುಖಂಡರು ಮುನಿರತ್ನ ವಿರುದ್ಧ ನವೆಂಬರ್ 2 ರಂದು ಪ್ರತಿಭಟನೆಗೆ ನಿರ್ಧರಿಸಿದ್ದರು.
ಕರ್ನಾಟಕ
Comments are closed.