ಚಿಕ್ಕಬಳ್ಳಾಪುರ: ಕೆಲಸ ಹುಡುಕಿಕೊಂಡು ಬೆಂಗಳೂರಿನಿಂದ ಚೆನ್ನೈ ಹೋಗಿದ್ದ ಯುವತಿಯನ್ನ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಾಮತೃಷೆಗೆ ಬಳಸಿಕೊಂಡಿದ್ದಾನೆ.
ಚೆನ್ನೈ ಮೂಲಕ ಷಣ್ಮುಗ ಮೂರ್ತಿ ಕಾಮತೃಷೆಗೆ ಬಳಸಿದ ವ್ಯಕ್ತಿ. ಚಿಕ್ಕಬಳ್ಳಾಪುರ ಮೂಲದ ಯುವತಿಯನ್ನು ಕೆಲಸ ಕೊಡಿಸುವ ಆಮಿಷವೊಡ್ಡಿ ಬೆಂಗಳೂರಿನಿಂದ ಚೆನ್ನೈಗೆ ಕರೆದುಕೊಂಡು ಹೋಗಿ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡು, ಇದೀಗ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಚಿಕ್ಕಬಳ್ಳಾಪುರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 7 ವರ್ಷಗಳ ಹಿಂದೆ ಗೀತಾ ಚಕ್ರವರ್ತಿ ಎಂಬಾಕೆ ಎಂಬಿಎ ಪದವೀಧರೆಯಾದ ಯುವತಿಯನ್ನು ಬೆಂಗಳೂರಿನಿಂದ ಚೆನ್ನೈಗೆ ಕರೆದುಕೊಂಡು ಹೋಗಿ ಷಣ್ಮುಗ ಸ್ವಾಮಿಯ ಬಳಿ ಕೆಲಸಕ್ಕೆ ಸೇರಿಸಿದ್ದಾಳೆ. ಆದರೆ ದಿನ ದಿನೇ ಯುವತಿಯ ಜೊತೆ ಸಲುಗೆ ಬೆಳೆಸಿಕೊಂಡ ಷಣ್ಮುಗ ಮೂರ್ತಿ ಆಕೆಯನ್ನ ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದು, ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
Comments are closed.