ಕರ್ನಾಟಕ

ಪ್ರವಾಸಕ್ಕೆಂದು ಬಂದ ಮೂವರು ಯುವಕರು ಸಮುದ್ರಪಾಲು

Pinterest LinkedIn Tumblr

murde

ಕಾರವಾರ: ಪ್ರವಾಸಕ್ಕೆ ಆಗಮಿಸಿದ್ದ 9 ಮಂದಿಯ ಪೈಕಿ ಮೂವರು ಯುವಕರು ಸಮುದ್ರಪಾಲಾದ ದುರ್ಘ‌ಟನೆ ಗುರುವಾರ ಭಟ್ಕಳ ತಾಲೂಕಿನ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.

ಮೃತರು ಮಂಡ್ಯದ ಕೆ.ಆರ್‌.ಪೇಟೆ ನಿವಾಸಿಗಳಾದ ಕುಮಾರ್‌(20),ಕಾರ್ತಿಕ್‌ಮಂಜೇಗೌಡ(19)ಮತ್ತು ಪುನೀತ್‌(26) ಎಂದು ಗುರುತಿಸಲಾಗಿದೆ.

ಮಂಡ್ಯದಿಂದ ಒಟ್ಟು 9 ಮಂದಿ ಉತ್ತರ ಕನ್ನಡದ ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಈಜಲು ಸಮುದ್ರಕ್ಕಿಳಿದ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯುವಕರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Comments are closed.