ಕರ್ನಾಟಕ

ಸಚಿವ ಆಂಜನೇಯರಿಂದ ಐಎಎಸ್ ಅಧಿಕಾರಿ ವಿರುದ್ಧ ಏಕವಚನದ ವಾಗ್ದಾಳಿ

Pinterest LinkedIn Tumblr

anjaneyaಚಿತ್ರದುರ್ಗ: ಹಿರಿಯ ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್ ಓರ್ವ ಸರ್ವಾಧಿಕಾರಿ, ಅವನು ಚಿತ್ರದುರ್ಗಕ್ಕೆ ಬಂದರೆ ಜನ ಅಟ್ಟಾಡಿಸಿಕೊಂಡು ಹೊಡೆದು ಚೀಮಾರಿ ಹಾಕುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಚಿಂತನ ಮಂಥನಾ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಪ್ರಸ್ತುತ ಪ್ರಾದೇಶಿಕ ಆಯುಕ್ತರಾಗಿರುವ ಆದಿತ್ಯ ಬಿಸ್ವಾಸ್ ಅವರಿಂದ ಉತ್ತಮ ಕೆಲಸ ನಡೆದಿದೆ ಎಂದು ತಮ್ಮ ಭಾಷಣದಲ್ಲಿ ಹೊಗಳಿದ್ದರು.

ಶ್ರೀಗಳ ಭಾಷಣದ ಬಳಿಕ ಮಾತನಾಡಿದ ಸಚಿವ ಆಂಜನೇಯ, ಹಿರಿಯ ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್ ನೀವು ಹೇಳಿದಷ್ಟು ಒಳ್ಳೆಯ ಅಧಿಕಾರಿಯಲ್ಲ. ಚಿತ್ರದುರ್ಗದ ನೂತನ ನಗರಸಭೆ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಒಬ್ಬ ಜಿಲ್ಲಾಧಿಕಾರಿ ಮಾಡಿದ ಎಡವಟ್ಟಿನಿಂದ ಆಡಳಿತ ಒಂದು ಕಡೆ ಮಾಡಿದರೆ ಸಭೆ ಮತ್ತೊಂದು ಕಡೆ ಮಾಡಬೇಕಾಗುತ್ತದೆ. ಕಟ್ಟಡದಲ್ಲಿ ಸರಿಯಾದ ಮೂಲಸೌಕರ್ಯವಿಲ್ಲ. ಆದಿತ್ಯ ಬಿಸ್ವಾಸ್ ಓರ್ವ ಸರ್ವಾಧಿಕಾರಿ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ವಾಗ್ದಾಳಿ ನಡೆಸಿದರು.

Comments are closed.