ಕರ್ನಾಟಕ

ಸರಣಿ ಕಳ್ಳತನ: 43 ಲಕ್ಷ ರೂ. ದೋಚಿದ ಕಳ್ಳರು

Pinterest LinkedIn Tumblr

kallaಬೆಂಗಳೂರು, ಅ. ೮- ನಗರದ ಹೊರವರ್ತುಲ ರಸ್ತೆಯ ಲಗ್ಗೆರೆ ಸೇತುವೆ ಸಮೀಪದ 2 ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರು, 43 ಲಕ್ಷ ನಗದು ಹಾಗೂ ವೈನ್ ಬಾಟಲ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಮೂರು ಕಾರುಗಳಲ್ಲಿ ಬಂದಿದ್ದ ಕಳ್ಳರು ಕೃಷ್ಣ ಎಂಟರ್ ಪ್ರೈಸಸ್ ಹಾಗೂ ಸ್ಪಿರಿಟ್ ಜೋನ್ ಅಂಗಡಿಗಳಲ್ಲಿ ಕರಾಮತ್ತು ಪ್ರದರ್ಶಿಸಿ ನಗದು ಹಾಗೂ ಮದ್ಯದ ಬಾಟಲಿಗಳನ್ನು ದೋಚಿ ಪರಾರಿಯಾಗಿರುವುದು ಅಂಗಡಿಗಳ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಬೆಳಿಗ್ಗೆ ಅಂಗಡಿಗೆ ಬಂದ ಮಾಲೀಕರು ನಗದು ಹಾಗೂ ಮದ್ಯದ ಬಾಟಲಿಗಳು ಕಾಣೆಯಾಗಿರುವುದನ್ನು ಕಂಡು ಗಾಬರಿಯಿಂದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಕಳ್ಳರು ಕೈಚಳಕ ತೋರಿರುವುದು ಪತ್ತೆಯಾಗಿದೆ.
ಈ ಸಂಬಂಧ ರಾಜಗೋಪಾಲ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರು ಸ್ವೀಕರಿಸಿದ ರಾಜಗೋಪಾಲನಗರ ಪೊಲೀಸ್ ಠಾಣೆ ಸಿಬ್ಬಂದಿ ಶ್ವಾನದಳ ಮತ್ತು ಬೆರಳಚ್ಚು ತಂಡದ ತಜ್ಞರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾರಿ ನಗದು ಹಾಗೂ ಮದ್ಯದ ಬಾಟಲಿಗಳನ್ನು ಕಳವು ಮಾಡಿರುವ ಕೃತ್ಯದ ಹಿಂದೆ ಪರಿಚಿತರು ಇಲ್ಲವೇ ದೀರ್ಘ ಕಾಲದಿಂದ ಹೊಂಚು ಹಾಕಿ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ಫೂಟೇಜ್‌ನ್ನು ತಮ್ಮ ವಶಕ್ಕೆ ಪಡೆದಿದ್ದು, ಆ ಮೂಲಕ ಕಳ್ಳರನ್ನು ಬಲೆಗೆ ಕೆಡವಲು ಶೋಧ ಮುಂದುವರೆಸಿದ್ದಾರೆ.

Comments are closed.