ಕರ್ನಾಟಕ

ದುಬೈ ವಿಮಾನ ನಿಲ್ದಾಣದಲ್ಲಿ ರಾಜ್ಯದ ವಕೀಲ ಗೋಪಾಲಕೃಷ್ಣ ದೇಸಾಯಿ ನಿಧನ

Pinterest LinkedIn Tumblr

vakilaaವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದಿಂದ ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದ ಡಬ್ಲಿನ್ ಡ್ರೈವ್‍ನಲ್ಲಿ ವಾಸವಿರುವ ಮಗಳ ಭೇಟಿಗಾಗಿ ತೆರಳಿದ್ದ ಹಿರಿಯ ವಕೀಲ ಗೋಪಾಲಕೃಷ್ಣ ದೇಸಾಯಿ ದುಬೈ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಹೆಂಡತಿ ಏಕಾಂಗಿಯಾಗಿ ಪರದಾಡುತ್ತಿದ್ದಾರೆ.

ಎಪ್ರಿಲ್ 4 ರಂದು ಸಿಂಧಗಿಯಿಂದ ಬೆಂಗಳೂರು ಮಾರ್ಗವಾಗಿ ಅಮೇರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಮಗಳಾದ ಜಯಾ ದೇಶಪಾಂಡೆ ಭೇಟಿಗಾಗಿ ಗೋಪಾಲಕೃಷ್ಣ ಮತ್ತು ಹೆಂಡತಿ ಪದ್ಮಾವತಿ ತೆರಳಿದ್ದರು. ತಮ್ಮ ವೀಸಾ ಅವಧಿ ಮುಗಿದ ಕಾರಣ ಅಕ್ಟೋಬರ್ 4 ರಂದು ಮರಳಿ ಭಾರತಕ್ಕೆ ಬರುತ್ತಿದ್ದಾಗ ದುಬೈ ವಿಮಾನನಿಲ್ದಾಣದಲ್ಲಿ ವಿಮಾನ ಕೆಳಗೆ ಇಳಿಯುತ್ತಿದ್ದಂತೆ ಹೃದಯಾಘಾತವಾಗಿದೆ.

ವಿಮಾನನಿಲ್ದಾಣದ ಆಸ್ಪತ್ರೆಯಲ್ಲಿ ಗೋಪಾಲಕೃಷ್ಣ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದಿದ್ದಾರೆ. ಆದರೆ ಅವರ ಮೃತ ದೇಹವನ್ನು ಕೊಡಲು ದುಬೈ ಸರ್ಕಾರ ಹಿಂದೆಮುಂದೆ ನೋಡುತ್ತಿದ್ದು, ಪತ್ನಿ ಪದ್ಮಾವತಿ ಏಕಾಂಗಿಯಾಗಿ ಪರದೇಶದಲ್ಲಿ ಪರದಾಡುತ್ತಿದ್ದಾರೆ.

ಗೋಪಾಲಕೃಷ್ಣಾರವರ ಮಗಳು ಜಯಾ ಸದ್ಯಕ್ಕೆ ದುಬೈಗೆ ತೆರಳುತಿದ್ದು, ಭಾರತ ಸರ್ಕಾರದಿಂದ ಸಹಾಯಕ್ಕಾಗಿ ಗೋಪಾಲಕೃಷ್ಣಾರವರ ಮಗ ಗಿರೀಶ್ ದೇಸಾಯಿ ಮನವಿ ಮಾಡಿದ್ದಾರೆ. ಸಾವಿನ ಸುದ್ದಿ ತಿಳಿದು ಸಿಂಧಗಿಯಲ್ಲಿರುವ ಗೋಪಾಲಕೃಷ್ಣ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.