ಕರ್ನಾಟಕ

ಕ್ಷುಲ್ಲಕ ಕಾರಣಕ್ಕೆ ಬಾಲಕನಿಗೆ ಕೊಟ್ಟ ಶಿಕ್ಷೆ ಏನು ಗೊತ್ತಾ..?

Pinterest LinkedIn Tumblr

boy

ಹಾಸನ : ಇಲ್ಲಿನ ಅರಸೀಕೆರೆಯಲ್ಲಿ ನಾಲ್ಕೈದು ಯುವಕರು ಕ್ಷುಲ್ಲಕ ಕಾರಣಕ್ಕೆ ಬಾಲಕನೊಬ್ಬನಿಗೆ ಅಮಾನವೀಯ ಶಿಕ್ಷೆ ನೀಡಿದ ವಿಡಿಯೋ ಬೆಳಕಿಗೆ ಬಂದಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಎಳನೀರು ಕೀಳಲು ತೆಂಗಿನ ಮರವೇರಿದ್ದ ಸುಮಾರು 10 ವರ್ಷ ಪ್ರಾಯದ ಬಾಲಕನನ್ನು ಹಿಡಿದು ಹೊಡೆದ ಯುವಕರು ಬಯಲಿನಲ್ಲಿ ಕಲ್ಲೊಂದರ ಮೇಲೆ ನಿಲ್ಲಿಸಿ ಇರುವೆ ಗೂಡನ್ನು ಕಾಲುಗಳ ಅಡಿಯಲ್ಲಿ ಬಿಟ್ಟು ಕ್ರೂರವಾಗಿ ವರ್ತಿಸಿದ್ದಾರೆ.

ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡಿದ್ದ ಯುವಕರು ಬಾಲಕ ನೋವಿನಿಂದ ಚೀರಿದರೂ ಇರುವೆಗಳನ್ನು ಕೊಡವಿಕೊಳ್ಳಲು ಅವಕಾಶಕೊಡಲಿಲ್ಲ. ಬಾಲಕ ನೋವಿನಿಂದ ಒದ್ದಾಡಿ ಬೊಬ್ಬಿಡುತ್ತಾ ನೆಲಕ್ಕೆ ಉರುಳಿ ಬಿದ್ದಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು, ಮಾಧ್ಯಮ ವರದಿಗಳನ್ನಾಧರಿಸಿ ಪೊಲೀಸರು ದೂರ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

Comments are closed.