ಕರ್ನಾಟಕ

ಭಾರಿ ಮಳೆಗೆ ತುಂಬಿದ ಜಲಾಶಯ

Pinterest LinkedIn Tumblr

hattikuniclrಯಾದಗಿರಿ, ಅ. ೪- ಕಳೆದ ತಿಂಗಳ ಸುರಿದ ಭಾರಿ ಮಳೆಗೆ ತಾಲೂಕಿನ ಹತ್ತಿಕುಣಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ. ಇದರಿಂದ ರೈತರಿಗೆ ಖುಷಿಯಾಗಿದೆ.
ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆ ಜಲಾಶಯ ಬತ್ತಿ ಹೋಗಿತ್ತು. ಇದರಿಂದ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ ಮೊದಲಾದ ಗ್ರಾಮದ ರೈತರು ಕಂಗಲಾಗಿದ್ದರು.

ಈಗ ಜಲಾಶಯ ಭರ್ತಿಯಾಗಿದ್ದು ಜಲಾಶಯದಿಂದ ಹೆಚ್ಚಿದ ನೀರನ್ನು ಕಾಲುವೆಗೆ ಹರಿ ಬಿಡಲಾಗುತ್ತಿದೆ. ಜಲಾಶಯ ನಂಬಿ ಕೃಷಿ ಮಾಡುವ ರೈತರ ಮೊಗದಲ್ಲೀಗ ಮಂದಹಾಸ ಮೂಡಿದೆ.

Comments are closed.