ಮಂಗಳೂರು : ಹಜ್ಜ್ ಯಾತ್ರಾರ್ಥಿಗಳನ್ನೊಳಗೊಂಡ ರಾಜ್ಯದ ಮೊದಲ ವಿಮಾನ ಗುರುವಾರ ರಾತ್ರಿ ಮದೀನಾದ ಪ್ರಿನ್ಸ್ ಮಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣಕ್ಕೆ ತಲುಪಿದೆ.
ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ 152 ಯಾತ್ರಾರ್ಥಿಗಳನ್ನು ಕೆ.ಸಿ.ಎಫ್ ಕಾರ್ಯಕರ್ತರು ಖರ್ಜೂರ,ಜಪಮಾಲೆ, ನೀರು, ನೀಡಿ ಪ್ರೀತಿಯಿಂದ ಬರಮಾಡಿಕೊಂಡರು .
ರಾಜ್ಯದಿಂದ ಬಂದಂತಹ ಹಜ್ಜಾಜಿಗಳು ನೆಲೆಸುವ ಲಾಡ್ಜ್ ಗಳ ಮಾಹಿತಿ ಸಂಗ್ರಹಿಸಿದ ಕಾರ್ಯಕರ್ತರು, ಅವರ ಲಗೇಜು ಸಾಮಾಗ್ರಿಗಳನ್ನು ಲಾಡ್ಜ್ ಗೆ ತಲುಪಿಸವಲ್ಲಿ ಸಹಕರಿಸಿದರು.
Comments are closed.