ಕರ್ನಾಟಕ

ಕಲ್ಲಪ್ಪ ಆತ್ಮಹತ್ಯೆ ಕೇಸ್: ಆರೋಪಿ ಪ್ರವೀಣ್ ಖಾಂಡ್ಯ ಬಂಧನ?

Pinterest LinkedIn Tumblr

praveen khaandya

ಬೆಂಗಳೂರು: ಸಿಐಡಿ ತಂಡದಿಂದ ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ.

ಈ ಪ್ರಕರಣದಲ್ಲಿ ಆರೋಪಿ ಪ್ರವೀಣ್ ಖಾಂಡ್ಯನನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಇದೆ. ಆದರೆ ಪೊಲೀಸರು ಇದನ್ನು ಸ್ಟಷ್ಟಪಡಿಸಿಲ್ಲ. ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡ ಮುರಗೋಡು ಗ್ರಾಮಕ್ಕೆ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಕಲ್ಲಪ್ಪನವರ ಕುಟುಂಬದ ಜೊತೆ ಮಾತಾಡಿದ್ದಾರೆ.

ಈ ವೇಳೆ ಕಲ್ಲಪ್ಪ ಮಾವ ಮತ್ತೊಮ್ಮೆ ಚಿಕ್ಕಮಗಳೂರು ಎಸ್‍ಪಿ ಸಂತೋಷ್ ಬಾಬು ವಿರುದ್ಧ ಆರೋಪ ಮಾಡಿದ್ದಾರೆ. ಸಿಐಡಿ ಎಸ್‍ಪಿ ರಾಜಪ್ಪ ನೇತೃತ್ವದ ತಂಡ ಚಿಕ್ಕಮಗಳೂರಲ್ಲಿ ಆರೋಪಿ ನಟರಾಜ್ ಹಾಗೂ ದೂರುದಾರ ತೇಜಸ್ ಗೌಡರನ್ನ ವಿಚಾರಣೆಗೆ ಒಳಪಡಿಸಿದೆ.

Comments are closed.