ಕರ್ನಾಟಕ

‘ಹಿಂದೂ ಹುಡುಗರನ್ನ ಬಂಧಿಸಬೇಡಿ’

Pinterest LinkedIn Tumblr

bjpಬೆಂಗಳೂರು: ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಅರಸೀಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಮುಂದೆ ಹಿಂದೂ ಯುವಕರನ್ನು ಬಂಧಿಸದಂತೆ ಹಾಸನ ಎಸ್ಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ವಿಡಿಯೊ ಈಗ ಬಹಿರಂಗಗೊಂಡಿದೆ.

ದೂರವಾಣಿ ಮೂಲಕ ಮಾತನಾಡಿರುವ ಯಡಿಯೂರಪ್ಪ, ‘ಹಿಂದೂ ಹುಡುಗರನ್ನ 14– 15 ಜನನ್ನ ಈಗಾಗಲೇ ಅರೆಸ್ಟ್ ಮಾಡಿದ್ದೀರಿ. ಇನ್ನೂ ಕೆಲವರನ್ನೆಲ್ಲಾ ಕಿರುಕುಳ ಕೊಡ್ತಾಯಿದಾರೆ. ದಯವಿಟ್ಟು ಇನ್ನೊಂದು ಆಥರದ್ದು ಮಾಡಬೇಡಿ. ಚೆನ್ನಾಗಿರಲ್ಲ ನೋಡಿ. ಇಲ್ಲದೆ ಇದ್ರೆ ಇರೋ ಅರಸೀಕೆರೆ ವಾತಾವರಣ ಕೆಟ್ಟೋಗುತ್ತದೆ. ಶಾಂತವಾತಾವರಣವನ್ನ ನೀವೇ ಕದಡಿದಂತೆ ಆಗುತ್ತೆ’ ಎಂದು ಹೇಳಿದ್ದಾರೆ.

ವಕೀಲ ಬ್ರಿಜೇಶ್‌ ಕಲಪ್ಪ ಎಂಬುವರು ಈ ವಿಡಿಯೊವನ್ನು ಜೂನ್‌ 11ರಂದು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಈವರೆಗೆ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೊ ವೀಕ್ಷಿಸಿದ್ದು ವಿಡಿಯೊ ಈಗ ವೈರಲ್‌ ಆಗಿದೆ.

Comments are closed.