ಮೈಸೂರು:ಊಟಿಗೆ ತೆರಳಲು ಪ್ರತ್ಯೇಕ ವಾಹನ ಬೇಕೆಂದು ಪಟ್ಟು ಹಿಡಿದು ಟ್ರಾವೆಲ್ಸ್ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದ ಹೈದ್ರಾಬಾದ್ ಮೂಲದ 6 ಮಂದಿ ಪ್ರವಾಸಿಗರಿಗೆ ಸಾರ್ವಜನಿಕರು ಚೆನ್ನಾಗಿ ಥಳಿಸಿರುವ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ.
ಪ್ರವಾಸಕ್ಕೆ ತೆರಳಲು ಹೈದ್ರಾಬಾದ್ ನಿಂದ 6 ಮಂದಿ ಯುವಕರು ಮೈಸೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಮಂಡಿಮೊಹಲ್ಲಾದಲ್ಲಿರುವ ಎಆರ್ ಕೆ ಟೂರಿಸ್ಟ್ ಟ್ರಾವೆಲ್ಸ್ ಮಾಲೀಕರಿಗೂ, ಪ್ರವಾಸಿಗರ ನಡುವೆ ವಾಹನದ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಯುವಕರು ಟ್ರಾವೆಲ್ಸ್ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದರು.
ಇದರಿಂದ ರೊಚ್ಚಿಗೆದ್ದ ಸ್ಥಳೀಯರು 6 ಮಂದಿ ಪ್ರವಾಸಿಗರಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-ಉದಯವಾಣಿ
Comments are closed.